ಕಾರ್ಗಿಲ್ ವಿಜಯ್ ದಿವಸ್, ಆಟಿದ ಕಂಪು ನೆಂಪು, ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ಕಾರ್ಗಿಲ್ ವಿಜಯ್ ದಿವಸ್, ಆಟಿದ ಕಂಪು ನೆಂಪು, ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ


ಮಂಗಳೂರು: ಯುವವಾಹಿನಿ ಮಂಗಳೂರು ಘಟಕ ವತಿಯಿಂದ ಕಾರ್ಗಿಲ್ ವಿಜಯ್ ದಿವಸ್, ಆಟಿದ ಕಂಪು ನೆಂಪು, ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜು.28 ರಂದು ಉರ್ವಸ್ಟೋರ್‌ನ ಯುವವಾಹಿನಿ ಸಭಾಂಗಣದಲ್ಲಿ ನಡೆಯಿತು.


ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಡಾ. ಮೀನಾಕ್ಷಿ ರಾಮಚಂದ್ರ ಅವರು, ಹಿಂದಿನ ಕಾಲದಲ್ಲಿ ಆಟಿ ಎಂಬುದು ಕಷ್ಟದ ತಿಂಗಳು. ಆಟಿ ತಿಂಗಳು ಬಂದರೆ ಉಣ್ಣಲು-ತಿನ್ನಲು ಬರಗಾಲ ಬಂದಂತೆ. ಆಟಿ, ಕರ್ಕಾಟಕ, ಆಷಾಢ ಈ ಪದಗಳು ಹೇಳಲು ಎಷ್ಟು ಕಷ್ಟವೋ ಅಷ್ಟೇ ಕಷ್ಟ ಆ ತಿಂಗಳಿನಲ್ಲಿ ಬರುತ್ತದೆ. ಆ ಸಮಯದ ಜನರು ತುಂಬಾ ಸಂಕಷ್ಟದಲ್ಲಿರುವುದನ್ನು ನಾನು ಸಹ ಅನುಭವಿಸಿರುತ್ತೇನೆ. ಹೊಲದಲ್ಲಿ ತಲೆಗೆ ಮುಟ್ಟಾಲೆ ಹಾಕುತ್ತಾ ಬೆನ್ನಿ ಬೆಸಾಯ ಮಾಡಿದವಳು ನಾನು ಎಂದು ಹೇಳಿದರು.


ಅಂದಿನ ದಿನಗಳಲ್ಲಿ ಸಿರಿವಂತರು ಹಂಚಿನ ಮನೆಯಲ್ಲಿ ವಾಸವಿದ್ದರೆ, ನಮ್ಮಂತ ಸಾಮಾನ್ಯ ಜನರು ಮುಳಿಯಲ್ಲಿ ತಯಾರಿಸಿದ ಮನೆ, ಮಣ್ಣಿನ ನೆಲ, ಗುಡುಗು ಮಳೆಗೆ ಯಾವಾಗ ಮನೆ ಬೀಳುವುದೋ ಎಂಬ ಜೀವ ಭಯದಲ್ಲಿ ಜೀವ ಕೈಯಲ್ಲಿ ಹಿಡಿದು ಬದುಕಿದ ದಿನ. ಇಂದು ಪ್ರತಿಯೊಂದು ಕಾಯಿಲೆಗೂ ಅದಕ್ಕೆ ತಕ್ಕಂತೆ ಮುದ್ದು ನೀಡಲು ಡಾಕ್ಟರ್ ಇದ್ದಾರೆ, ಆದರೆ ಅಂದು ಆರೋಗ್ಯಕ್ಕೆ ಪ್ರಕೃತಿಯಲ್ಲಿ ಲಭ್ಯವಿದ್ದ ತೇವು, ತೊಜಂಕ್, ಹಲಸಿನಹಣ್ಣು ಹಾಗೂ ಅದರ ಬೀಜ ಇಂತಹ ಅಂಶಗಳಿಂದ ಪ್ರಕೃತಿಯಿಂದಲೇ ಮದ್ದು ದೊರೆಯುತ್ತಿತ್ತ ಇಂದು ಅಂದಿನ ಕಾಲದ ಪದಾರ್ಥಗಳನ್ನು ತಿನಿಸುವ ಜೊತೆಗೆ ಕಷ್ಟದ ಅರಿವನ್ನು ಮುಂದಿನ ಜನಾಂಗಕ್ಕೆ ತಿಳಿಸುವ ಪ್ರಯತ್ನ ಮಾಡೋಣ ಎಂದು ಆಟಿದ ಕಂಪು ನೆಂಪು ಕಾರ್ಯಕ್ರಮದ ಉಪನ್ಯಾಸ ನೀಡಲು ಆಗಮಿಸಿದ್ದ ಡಾ. ಮೀನಾಕ್ಷಿ ರಾಮಚಂದ್ರ ಆಟಿ ತಿಂಗಳ ಮಹತ್ವದ ಬಗ್ಗೆ ಮಾಹಿತಿ ನೀಡಿದರು.

ಕಾರ್ಗಿಲ್ ವಿಜಯ್ ದಿವಸ್ ಆಚರಣೆಯ ಅಂಗವಾಗಿ ಯೋಧರಾದ ಯೋಗೇಂದ್ರ ಸುವರ್ಣ ಹಾಗೂ ದಿನೇಶ್ ಅವರನ್ನು ಯುವವಾಹಿನಿ ಮಂಗಳೂರು ಘಟಕದ ವತಿಯಿಂದ ಗೌರವಿಸಲಾಯಿತು.

ನಿವೃತ್ತ ಯೋಧ ಯೋಗೇಂದ್ರ ಸುವರ್ಣ ಮಾತನಾಡಿ, ಕಾರ್ಗಿಲ್ ಎಂಬುದು ಒಂದು ಸ್ಥಳದ ಹೆಸರು ಅಂದು ಯೋಧರು ಟೈಗರ್ ಬೆಟ್ಟವನ್ನು ಹತ್ತಿದ ಸಂದರ್ಭದಲ್ಲಿ ಎದುರಾದ ಸಂಕಷ್ಟಗಳು ಅದೆಲ್ಲವನ್ನೂ ಮೆಟ್ಟಿ ನಿಂತು ದೇಶದ ರಕ್ಷಣೆಗಾಗಿ ಹೋರಾಡಿ ಮಾತೃಭೂಮಿಯ ತುತ್ತ ತುದಿಯಲ್ಲಿ ಭಾರತದ ಧ್ವಜವನ್ನು ಅರಳಿಸಿದ ಅದ್ಭುತ ರೋಮಾಂಚಕ ಅನುಭವವನ್ನು ಈ ಕಾರ್ಯಕ್ರಮದಲ್ಲಿ ಹಂಚಿಕೊಂಡರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಂಗಳೂರು ಘಟಕದ ಅಧ್ಯಕ್ಷ ಹರೀಶ್ ಕೆ. ಸುವರ್ಣ ಮಾತನಾಡಿ, ಜು.೨೯ ರಂದು ನಡೆಯಲಿರುವ ಗುರು ಪೂರ್ಣಿಮೆಯ ಪ್ರಯುಕ್ತ ಇಂದು ಗುರುಗಳ ಶತಅಷ್ಟೋತ್ತರ ಪಠಿಸಿ ಪೂಜೆ ಸಲ್ಲಿಸಲಾಯಿತು. ನನ್ನ ಜೀವನದಲ್ಲಿ ನಾರಾಯಣ ಗುರುಗಳ ತೋರಿದ ದಾರಿ ಅವಿಸ್ಮರಣೀಯ ಎನ್ನುತ್ತಾ, ಆಟಿ ಎಂದರೆ ಹಿಂದಿನ ಕಾಲದಲ್ಲಿ ಒಲೆಗೆ ಬೆಂಕಿ ಹಾಕಲಾರದಷ್ಟು ಮಳೆಯ ಕಾಲ, ರೋಗರುಜಿನಗಳ ಕಾಲ, ಆಟಿ ಅಂದರೆ ಅನಿಷ್ಟ ಎಂದೇ ಹೇಳಲಾಗುತ್ತಿತ್ತು. ಆಟಿ ಸಮಯದಲ್ಲಿ ನಮ್ಮ ದೈವಗಳು ಘಟ್ಟಕ್ಕೆ ಹೋಗುವ ಕಾರಣ ನಮ್ಮ ರಕ್ಷಣೆಗಾಗಿ ಆಟಿ ಕಳಂಜ ನನ್ನು ಕಳುಹಿಸುತ್ತಾರೆ ಎಂಬುದು ನಂಬಿಕೆ. ಇಂದು ಆಟಿ ತಿಂಗಳಲ್ಲಿ ಬಗೆಬಗೆಯ ತಿಂಡಿ ತಿನಿಸುಗಳನ್ನು ತಿನ್ನುವ ಸಂಭ್ರಮ ಕಾಲ ಎಂದರು.

ಹಿಂದಿನ ಕಾಲದಲ್ಲಿ ದೇಶ ಕಾಯುವ ಸೈನಿಕರು ಮಾಡಿದ ತ್ಯಾಗವನ್ನು ನಾವು ಮರೆಯಬಾರದು ಯಾಕೆಂದರೆ ಇಂದು ಟಿವಿ ಇತರ ಮಧ್ಯಮದ ಮೂಲಕ ಎಲ್ಲವೂ ಕೂಡಲೇ ತಿಳಿಯುವುದು. ಆದರೆ ಅಂದು ಏನು ನಡೆಯುತ್ತಿತ್ತು ಎಂದು ನಮಗೆ ತಿಳಿಯುತ್ತೀರಲಿಲ್ಲ ಆದ್ದರಿಂದ ಪ್ರತಿಯೊಂದು ಯೋಧರಿಗೂ ಗೌರವ ಸಲ್ಲಿಸುತ್ತಾ ಅವರ ನಿಸ್ವಾರ್ಥ ಸೇವೆಯನ್ನು ಸ್ಮರಿಸೋಣ ಎಂದರು. ಹಾಗೇನೆ ಯುವವಾಹಿನಿ ಸಂಸ್ಥೆಯ ಪ್ರತಿ ಘಟಕಗಳಲ್ಲಿ ವಿದ್ಯಾರ್ಥಿ ಪುರಸ್ಕಾರ ಕಾರ್ಯಕ್ರಮ ನಡೆಯುತ್ತದೆ ಆದರೆ ಅಂತಹ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಯುವವಾಹಿನಿ ಘಟಕಗಳಿಗೆ ಸೇರಿಸುವಂತ ಕೆಲಸ ಆಗಬೇಕು, ಮುಂದೆ ಅವರೆಲ್ಲರೂ ಯುವವಾಹಿನಿ ಸಂಸ್ಥೆಯ ಶಕ್ತಿಯಾಗಬಲ್ಲರು ಎಂದರು.

ಈ ಸಂದರ್ಭದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಅಂಕಗಳಿಸಿದ ಘಟಕದ ಸದಸ್ಯರ ಮಕ್ಕಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಕೇಂದ್ರ ಸಮಿತಿಯ ಹಾಗೂ ಇತರ ಘಟಕಗಳ ಮಾಜಿ ಅಧ್ಯಕ್ಷರುಗಳು, ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ನೀತಾ ಅಳಪೆ ಪ್ರಾಥಿಸಿದರು. ಪೂರ್ಣಿಮಾ ಯು.ಆರ್. ಸ್ವಾಗತಿಸಿದರು. ದಿನೇಶ್ ಕಂದಾವರ ವಂದಿಸಿ, ಸತೀಶ್. ಕೆ ನಿರೂಪಿಸಿದರು. ಕಾರ್ಯಕ್ರಮದ ಬಳಿಕ ಆಟಿಯ ಬಗೆಬಗೆಯ ತಿಂಡಿತಿನಸುಗಳ ಅಯೋಜನೆ ಮಾಡಲಾಗಿತ್ತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article