ಕೊಡ್ಯಡ್ಕ ಶ್ರೀ ಮಹಾಂಕಾಳಿ & ಬ್ರಹ್ಮ ಮುಗೇರಕಲ ಕೊರಗಜ್ಜ ದೇವಸ್ಥಾನ ಜೀಣೋ೯ದ್ಧಾರಕ್ಕೆ ಧಮ೯ಸ್ಥಳದಿಂದ ರೂ. 2 ಲಕ್ಷ ಮಂಜೂರು: ಹಸ್ತಾಂತರ
Friday, August 28, 2026
ಮೂಡುಬಿದಿರೆ: ತಾಲೂಕಿನ ಶ್ರೀ ಮಹಾಂಕಾಳಿ & ಬ್ರಹ್ಮ ಮುಗೇರಕಲ ಕೊರಗಜ್ಜ ದೇವಸ್ಥಾನ ಕೊಡ್ಯಡ್ಕ ಇದರ ಜೀರ್ಣೋದ್ಧಾರದ ಕಾರ್ಯಕ್ಕೆ ಶ್ರೀ ಕ್ಷೇತ್ರ ಧಮ೯ಸ್ಥಳದಿಂದ ಮಂಜೂರಾಗಿರುವ ರೂ 2 ಲಕ್ಷದ ಡಿಡಿಯನ್ನು ಮೂಡುಬಿದಿರೆ ತಾಲೂಕಿನ ಯೋಜನಾಧಿಕಾರಿ ಧನಂಜಯ ಅವರು ಶುಕ್ರವಾರ ಹಸ್ತಾಂತರಿಸಿದರು.
ತಾಲೂಕಿನ ಜನಜಾಗೃತಿ ವೇದಿಕೆಯ ಅಧ್ಯಕ್ಷ ವಾಸುದೇವ ನಾಯಕ್, ಅಲಂಗಾರು ವಲಯದ ಅಧ್ಯಕ್ಷ ಶಿವರಾಮ್ ಕೊಡ್ಯಡ್ಕ ಒಕ್ಕೂಟದ ಅಧ್ಯಕ್ಷರು ಪ್ರಕಾಶ್ ದೇವಸ್ಥಾನ ಸಮಿತಿಯ ಅಧ್ಯಕ್ಷ ಸಂದೀಪ್, ವಲಯ ಮೇಲ್ವಿಚಾರಕ ಚಂದ್ರಹಾಸ ಶೆಟ್ಟಿ, ಸೇವಾಪ್ರತಿನಿಧಿ ಯಶೋಧ, ಸಂಧ್ಯಾ ಹಾಗೂ ಒಕ್ಕೂಟದ ಪದಾಧಿಕಾರಿಗಳು ಈ ಸಂದಭ೯ ಉಪಸ್ಥಿತರಿದ್ದರು.
