ಕಾಂತಾವರ ಶ್ಯಾಮರಾಯ ಆಚಾರ್ಯ ಮೈಂತೂರು ನಿಧನ
Friday, August 21, 2026
ಮೂಡುಬಿದಿರೆ: ಕಾಂತಾವರ ಮೈಂತೂರು ಶ್ಯಾಮರಾಯ ಆಚಾರ್ಯ ಅಲ್ಪಕಾಲದ ಅನಾರೋಗ್ಯದಿಂದ ನಿಧನ ಹೊಂದಿದರು.
ಕಾಂತಾವರ ಶ್ರೀ ನಾಗಲಿಂಗ ಸ್ವಾಮಿ ವಿಶ್ವಕರ್ಮ ಸಂಘದ ಅಧ್ಯಕ್ಷರಾಗಿ ಹಾಗೂ ಕಾಂತಾವರ ಗ್ರಾಮದ ಕೇಪ್ಲಾಜೆ, ಮೂಡುಬಿದಿರೆಯ ಕೊಡಂಗಲ್ಲು ಹಾಗೂ ಕೋಟೆಬಾಗಿಲು ಇಲ್ಲಿನ ಮಾರಿಗುಡಿಗಳ ಉತ್ಸವದ ದಾರುಬಿಂಬ ರಚನೆಯಲ್ಲಿ ಸುದೀರ್ಘ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.
ಹಲವು ದೇವಸ್ಥಾನ, ದೈವಸ್ಥಾನ , ಸಂಘ ಸಂಸ್ಥೆಗಳು ಅವರ ಸೇವೆಯನ್ನು ಗುರುತಿಸಿ ಸನ್ಮಾನಿಸಿದೆ.
ಮೃತರು ಓವ೯ ಪುತ್ರ, ನಾಲ್ವರು ಪುತ್ರಿಯರು ಸೇರಿದಂತೆ ಆಪಾರ ಬಂಧು ಬಳಗವನ್ನು ಆಗಲಿದ್ದಾರೆ.