ಶ್ರೀ ಪಂಚಶಕ್ತಿ ವಿವಿದೋದ್ದೇಶ ಸಹಕಾರಿ ಸಂಘದ ಮಹಾಸಭೆ: 2025-26ನೇ ಸಾಲಿನಲ್ಲಿ 13 ಲಕ್ಷ ಲಾಭಾಂಶ: ರಂಜಿತ್ ಪೂಜಾರಿ

ಶ್ರೀ ಪಂಚಶಕ್ತಿ ವಿವಿದೋದ್ದೇಶ ಸಹಕಾರಿ ಸಂಘದ ಮಹಾಸಭೆ: 2025-26ನೇ ಸಾಲಿನಲ್ಲಿ 13 ಲಕ್ಷ ಲಾಭಾಂಶ: ರಂಜಿತ್ ಪೂಜಾರಿ


ಮೂಡುಬಿದಿರೆ: ಶ್ರೀ ಪಂಚಶಕ್ತಿ ವಿವಿದೋದ್ದೇಶ ಸಹಕಾರಿ ಸಂಘವು 2025-26 ನೇ ಸಾಲಿನಲ್ಲಿ12% ಡಿವಿಡೆಂಡ್ ಮತ್ತು 13 ಲಕ್ಷ ಲಾಭಾಂಶ ಗಳಿಸಿದೆ ಎಂದು ಸಂಘದ ಅಧ್ಯಕ್ಷ ರಂಜಿತ್ ಪೂಜಾರಿ ಘೋಷಿಸಿದರು. 


ಅವರು ಭಾನುವಾರ ಸಮಾಜ ಮಂದಿರದಲ್ಲಿ ನಡೆದ ಶ್ರೀ ಪಂಚಶಕ್ತಿ ವಿ. ಎಸ್. ಎಸ್. ಇದರ 12ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. 

ಎಸ್ಸೆಸೆಲ್ಸಿಯಲ್ಲಿ 85% ಕ್ಕಿಂತ ಹೆಚ್ಚು ಅಂಕಗಳಿಸಿರುವ ಸ್ವಸಹಾಯ ತಂಡದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು. ಐದು ಜನ ಉತ್ತಮ ಗ್ರಾಹಕರನ್ನು ಗುರುತಿಸಿ ಗೌರವಿಸಲಾಯಿತು. ಅತಿ ಹೆಚ್ಚು ಪಿಗ್ಮಿ ಸಂಗ್ರಹಣೆ ಮಾಡಿದ ದಿನೇಶ್ ಪೂಜಾರಿಯವರನ್ನು ಸನ್ಮಾನಿಸಲಾಯಿತು.

ಮುಖ್ಯ ಕಾರ್ಯನಿರ್ವಣಾಧಿಕಾರಿ ಯು. ರಾಜಶೇಖರ್ ಮಧ್ಯಸ್ಥ ಅವರು ಮಹಾಸಭೆಯ ನೋಟಿಸ್ ನ್ನು ಓದಿ ದಾಖಲಿಸಿ 25- 26 ನೇ ಸಾಲಿನ ವಾರ್ಷಿಕ ವರದಿಯನ್ನು ಮಂಡಿಸಿ ಮಂಜೂರಾತಿ ಪಡೆದುಕೊಂಡರು.

ನಿರ್ದೇಶಕ ಸುರೇಶ್ ಪೂಜಾರಿ ಅವರು 2024-25 ಸಾಲಿನ ಮಹಾಸಭೆಯ ನಡವಳಿಕೆಯನ್ನು  ಓದಿದರು. ಗಣೇಶ್ .ಆರ್. ನಾಯ್ಕ್ ಅವರು 25- 26ನೇ ಸಾಲಿನ ಲೆಕ್ಕ ಪರಿಶೋಧಿತ ಲೆಕ್ಕಪತ್ರಗಳನ್ನು ಮಂಡನೆಯು  ಮಂಡಿಸಿದರು. ಬಜೆಟ್ ಕ್ಕಿಂತ ಜಾಸ್ತಿಯಾದ ಖರ್ಚಿಗೆ ಸ್ವಾತಿ ಅವರು ಮಂಡಿಸಿ ಮಂಜೂರಾತಿ ಪಡೆದುಕೊಂಡರು.

ನಿದೇ೯ಶಕ ರಾಜೇಂದ್ರ .ಬಿ ಅವರು ಲಾಭಾಂಶವನ್ನು ವಿಂಗಡನೆ ಮಾಡಿದರು. ಶರತ್ .ಜೆ. ಶೆಟ್ಟಿ ಅವರು 26-27ನೇ ಸಾಲಿನ ಬಜೆಟ್ ಮಂಡಿಸಿದರು. ಉಪಾಧ್ಯಕ್ಷರಾದ ಶಂಕರನಾರಾಯಣ ಭಟ್ ಇವರು ಲೆಕ್ಕ ಪರಿಶೋಧನೆ ಮಂಡಿಸಿದರು. 

ರೇಖಾ ಕೋಟ್ಯಾನ್ ಮಾಹಿತಿ ನೀಡಿದರು. 

ಪ್ರತಿಭಾ ಅವರು ಸ್ವಸಹಾಯ ತಂಡದ 3 ವರ್ಷದ ಲಾಭಾಂಶವನ್ನು  ಮಂಡಿಸಿದರು.  

ನಿರ್ದೇಶಕರಾದ ರಮೇಶ .ಎಸ್. ಶೆಟ್ಟಿ ಸ್ವಾಗತಿಸಿದರು.   ಗೋಪಾಲ್ ಶೆಟ್ಟಿಗಾರ್  ಕಾರ್ಯಕ್ರಮವನ್ನು ನಿರೂಪಿಸಿದರು. ನಿರ್ದೇಶಕಿ  ಉಷಾ ಭಂಡಾರಿ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article