ಖಾಸಗಿ ವ್ಯಕ್ತಿಗಳಿಂದ ಸರಕಾರಿ ಜಾಗ ಅತಿಕ್ರಮಣ: ಕ್ರಮಕೈಗೊಳ್ಳದ ಅಧಿಕಾರಿಗಳು-ಬೆಳುವಾಯಿ ಗ್ರಾಮಸಭೆಯಲ್ಲಿ ಮಾಜಿ ಅಧ್ಯಕ್ಷರು, ಸದಸ್ಯರ ಆರೋಪ
ಪಂಚಾಯತ್ ಜಾಗವನ್ನು ಚಂದ್ರಶೇಖರ ಎಂಬವರು ಅತಿಕ್ರಮಣ ಮಾಡಿ ಶೆಡ್ಡೊಂದನ್ನು ನಿಮಿ೯ಸಿದ್ದು ಇದನ್ನು ನೆಲಸಮ ಅವಕಾಶವಿದ್ದರೂ ಕಂದಾಯ ಅಧಿಕಾರಿಗಳು ಮೌನ ವಹಿಸಿರುವ ಬಗ್ಗೆ ಸುರೇಶ್ ಗೋಲಾರ ಮತ್ತು ಶೇಖ್ ಶಹಬಾಜ್ ಅವರು ಗ್ರಾಮಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ಇದಕ್ಕೆ ಉತ್ತರಿಸಿದ ವಿಎ ಅಪೂವ೯ ಅವರು ಈ ಬಗ್ಗೆ ತಹಶೀಲ್ದಾರ್ ಅವರ ಗಮನಕ್ಕೆ ತರಲಾಗಿದೆ ಆದರೆ ಈ ಪ್ರಕರಣವು ನ್ಯಾಯಾಲದಲ್ಲಿದೆ ಎಂದರು.
ಬೆಳುವಾಯಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಖಾಯಂ ವೈದ್ಯರು ಬೇಕೆಂಬ ಆಗ್ರಹವು ಸಭೆಯಲ್ಲಿ ಕೇಳಿ ಬಂತು.
ಮಾಜಿ ಅಧ್ಯಕ್ಷ ರಾಘು ಪೂಜಾರಿ, ಗ್ರಾಮಸ್ಥ ಸೌಕತ್ ಆಲಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸವಿತ ಮಂದೋಲಿಕರ ಸಹಿತ ಗ್ರಾಮಸ್ಥರು ಚಚೆ೯ಯಲ್ಲಿ ಪಾಲ್ಗೊಂಡರು.
ಡಾ. ಮಲ್ಲಿಕಾಜು೯ನ ರಾಯಪ್ಪ ಈಳಿಗೇರ ಮಾಗ೯ದಶಿ೯ ಅಧಿಕಾರಿಯಾಗಿ ಭಾಗವಹಿಸಿದ್ದರು.
ಬೆಳುವಾಯಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಭರತ್, ಮೆಸ್ಕಾಂ ನ ಬಸವ ಗೌಡ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವೀಣಾ ಎಸ್. ಹೆಗ್ಡೆ ಇಲಾಖಾ ಮಾಹಿತಿ ನೀಡಿದರು.
ಕಾಯ೯ದಶಿ೯ ಶೇಖರ ಎಂ. ಸ್ವಾಗತಿಸಿದರು. ದ್ವಿತೀಯ ದಜೆ೯ ಲೆಕ್ಕ ಸಹಾಯಕ ಶ್ರೀಧರ ಅಣಗೌಡರ್ ವಾಡ್೯ ಸಭೆಯ ವರದಿ ಮಂಡಿಸಿದರು.


