Moodubidire: ಜೇಸಿಐ ಮೂಡುಬಿದಿರೆ ತ್ರಿಭುವನ್‌ನಿಂದ ತರಬೇತಿ ಕಾರ್ಯಾಗಾರ

Moodubidire: ಜೇಸಿಐ ಮೂಡುಬಿದಿರೆ ತ್ರಿಭುವನ್‌ನಿಂದ ತರಬೇತಿ ಕಾರ್ಯಾಗಾರ


ಮೂಡುಬಿದಿರೆ: ಜೇಸಿಐ ಮೂಡುಬಿದಿರೆ ತ್ರಿಭುವನ್ ಮತ್ತು ಬಂಟರ ಸಂಘ ಕಡಂದಲೆ ಪಾಲಡ್ಕ ಇವುಗಳ ಆಶ್ರಯದಲ್ಲಿ ಪರಿಸರ ಪೂರಕ ಪೇಪರ್ ಬ್ಯಾಗ್ ಮತ್ತು ಜ್ಯೂಟ್ ಬ್ಯಾಗ್ ಕೌಶಲಾಭಿವೃದ್ಧಿ ಹಾಗೂ ಸ್ವ ಉದ್ಯೋಗ ತರಬೇತಿ ಕಾರ್ಯಗಾರವು ಕಡಂದಲೆ ಗಣೇಶ ದರ್ಶನ ಪಲ್ಕೆ ಸಭಾಂಗಣದಲ್ಲಿ ಶನಿವಾರ ನಡೆಯಿತು.

ಕಡಂದಲೆ ಬಂಟರ ಸಂಘದ ಅಧ್ಯಕ್ಷ ಸುದರ್ಶನ್ ಶೆಟ್ಟಿ ಕಾರ್ಯಾಗಾರವನ್ನು ಉದ್ಘಾಟಿಸಿದರು.

ಜೇಸಿಐ ಮೂಡುಬಿದಿರೆ ತ್ರಿಭುವನ್‌ನ ಅಧ್ಯಕ್ಷ ಜೆಎಫ್‌ಎಮ್ ಪ್ರದೀಪ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.

ಪೂರ್ವಾಧ್ಯಕ್ಷ ಹೆಚ್. ಜಿಎಫ್ ಅನಂತವೀರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಪ್ರಾಜೆಕ್ಟ್ ಡೈರೆಕ್ಟರ್ ಫರಾಝ್ ಬೆದ್ರ ಉಪಸ್ಥಿತರಿದ್ದರು.






Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article