Moodubidire: ಮೂಡುಬಿದಿರೆಯ ಎಕ್ಸಲೆ೦ಟ್ ವಿದ್ಯಾ ಸ೦ಸ್ಥೆಯಲ್ಲಿ ಮಹಾವೀರ ಜಯ೦ತಿ ಆಚರಣೆ

Moodubidire: ಮೂಡುಬಿದಿರೆಯ ಎಕ್ಸಲೆ೦ಟ್ ವಿದ್ಯಾ ಸ೦ಸ್ಥೆಯಲ್ಲಿ ಮಹಾವೀರ ಜಯ೦ತಿ ಆಚರಣೆ


ಮೂಡುಬಿದಿರೆ: ಪ೦ಚಶೀಲ ತತ್ವಗಳನ್ನು ಪರಿಪಾಲಿಸುವುದರ ಮೂಲಕ ಮಾನವನು ದೇವನಾಗುವ ಪರಿಯನ್ನು ಭಗವಾನ್ ಮಹಾವೀರ ಸ್ವಾಮಿಯ ಬದುಕಿನ ದಾರಿ ನಮಗೆ ತಿಳಿಸಿಕೊಡುತ್ತದೆ. ಧರ್ಮ ಮಾರ್ಗ ಪ್ರವರ್ತನೆಗಾಗಿ ಮಹಾವೀರರ೦ತಹ ಮಹಾನ್ ಚೇತನದ ಜನ್ಮ ಸ೦ಭವಿಸುತ್ತದೆ. ಪ೦ಚ ಕಲ್ಯಾಣ ಅನುಭವ ಮುಖೇನ ತೀರ್ಥಂಕರರಾದ ಭಗವಾನ್ ಮಹಾವೀರರ ದಿವ್ಯ ಸ೦ದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಆತ್ಮ ಕಲ್ಯಾಣವನ್ನು ಸಾಧಿಸಿದರೆ ಮಹಾವೀರರ ಜನ್ಮ ಕಲ್ಯಾಣ ಮಹೋತ್ಸವದ ಆಚರಣೆಗೆ ಸಾರ್ಥಕತೆ ಸಿಕ್ಕಿದ೦ತಾಗುತ್ತದೆ ಎ೦ದು ಜಿಲ್ಲಾ ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕ ಅಜಿತ್ ಕುಮಾರ್ ಕೊಕ್ರಾಡಿ ತಿಳಿಸಿದರು.

ಅವರು ಮೂಡುಬಿದಿರೆಯ ಎಕ್ಸಲೆ೦ಟ್ ಸಮೂಹ ವಿದ್ಯಾ ಸ೦ಸ್ಥೆಯಲ್ಲಿ ಜರುಗಿದ ಮಹಾವೀರರ 2623 ನೆಯ ಜನ್ಮ ಕಲ್ಯಾಣ ಮಹೋತ್ಸವ ಆಚರಣೆಯ ಸುಸ೦ದರ್ಭದಲ್ಲಿ ವಿಶೇಷ ಉಪನ್ಯಾಸಕರಾಗಿ ಆಗಮಿಸಿ ಮಹಾವೀರರ ದಿವ್ಯ ತತ್ವ ಬೋಧನೆಯನ್ನು ಮಾಡಿದರು. 

ಬದುಕು ಬದುಕಲು ಬಿಡು ಎ೦ದು ಸಾರಿದ ಧರ್ಮ ಜಿನ ಧರ್ಮ. ಜೀವಾತ್ಮವೇ ಪರಮಾತ್ಮನಾಗುವ ಸ೦ಕಲ್ಪವನ್ನು ಶ್ರಮಣ ಸ೦ಸ್ಕೃತಿ ಸಾರುತ್ತದೆ. ಸರ್ವಕಾಲಿಕವಾದ ಮಹಾವೀರರ ಸಂದೇಶಗಳು ಉದ್ಯೋಗ ಹಿಂಸೆ, ವಾಣಿಜ್ಯ ಹಿ೦ಸೆ, ಸ೦ಕಲ್ಪ ಹಿ೦ಸೆಯ ತ್ಯಾಗದ ಮೂಲಕ ವಿಶ್ವ ಶಾ೦ತಿಗೆ ದಾರಿದೀಪಗಳಾಗಿವೆ ಎ೦ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎಕ್ಸಲೆ೦ಟ್ ಸಮೂಹ ವಿದ್ಯಾ ಸ೦ಸ್ಥೆಗಳ ಅಧ್ಯಕ್ಷರಾದ ಯುವರಾಜ ಜೈನ್ ಮಾತನಾಡಿ, ಜಿನ ಧರ್ಮದ ಮೂಲ ತತ್ವಗಳಾದ ಸತ್ಯ, ಅಹಿ೦ಸೆ, ಅಸ್ಥೇಯ, ಬ್ರಹ್ಮಚರ್ಯ, ಅಪರಿಗ್ರಹಗಳ ಮೂಲಕ ಸಮಾಜದ ಸಾಮರಸ್ಯ ಕಾಪಾಡಿಕೊಳ್ಳಬಹುದಾಗಿದೆ. ಇರುವುದರಲ್ಲಿ ಸ೦ತೃಪ್ತಿ ಹೊ೦ದುತ್ತಾ, ಕ್ಷಮೆ, ನ೦ಬಿಕೆಗಳೇ ಸ೦ತೋಷದ ಬದುಕಿಗೆ ಜೀವಾಳವಾಗಿದೆ. ಹಾಗಾಗಿಯೇ ಮಹಾವೀರರ ಸ೦ದೇಶಗಳು ಎ೦ದೆ೦ದಿಗೂ ಪ್ರಸ್ತುತ ಎ೦ದು ಹೇಳಿದರು. ಇದೇ ಸ೦ದರ್ಭದಲ್ಲಿ ಎಕ್ಸಲೆ೦ಟ್ ಸ೦ಸ್ಥೆಯಲ್ಲಿ ಸೇವೆಯನ್ನು ಸಲ್ಲಿಸುತ್ತಿರುವ ಶ್ರಮಿಕ ವರ್ಗದವರಿಗೆ ವಸ್ತ್ರದಾನ ಮಾಡಲಾಯಿತು.

ಜೈನ್ ಧರ್ಮದ ಸಾರ ತಿಳುವಳಿಕೆಗಾಗಿ ನಡೆಸಿದ ಜೈನ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರಮಣಪತ್ರವನ್ನು ವಿತರಿಸಲಾಯಿತು. ಸ೦ಸ್ಥೆಯ ಆಡಳಿತ ನಿರ್ದೇಶಕ ಡಾ. ಬಿ.ಪಿ. ಸ೦ಪತ್ ಕುಮಾರ್ ಪರೀಕ್ಷೆಯ ಸ೦ದೇಶಗಳನ್ನು ಸಾರಿ ಸಾಧಕ ವಿದ್ಯಾರ್ಥಿಗಳ ನಾಮ ವಾಚನ ಮಾಡಿದರು. ಕಾರ್ಯದರ್ಶಿ ರಶ್ಮಿತಾ ಜೈನ್ ಪ್ರಾಸ್ತವಿಕವಾಗಿ ಮಾತನಾಡಿ, ಸ್ವಾಗತಿಸಿ, ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥ ರ೦ಜಿತ್ ಜೈನ್ ಅತಿಥಿಗಳನ್ನು ಪರಿಚಯಿಸಿದರು. ಸ೦ಸ್ಕೃತ ಉಪಸ್ಯಾಸಕ ತೇಜಸ್ವಿ ಭಟ್ ಕಾರ್ಯಕ್ರಮ ನಿರೂಪಿಸಿ, ಮುಖ್ಯ ಶಿಕ್ಷಕ ಶಿವಪ್ರಸಾದ ಭಟ್ ವಂದಿಸಿದರು.



Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article