Mangalore: ಸಿಡಿಲು ಬಡಿದು ಮನೆಗೆ ಹಾನಿ-ಶಾಸಕ ಕಾಮತ್ ಭೇಟಿ

Mangalore: ಸಿಡಿಲು ಬಡಿದು ಮನೆಗೆ ಹಾನಿ-ಶಾಸಕ ಕಾಮತ್ ಭೇಟಿ


ಮಂಗಳೂರು: ಮಂಗಳೂರು ನಗರದಲ್ಲಿ ಸುರಿದ ಭಾರೀ ಮಳೆಯ ಸಂದರ್ಭದಲ್ಲಿ ಅಳಪೆ ದಕ್ಷಿಣದ ಶ್ರೀ ಮಹಾದೇವಿ ಭಜನಾ ಮಂದಿರ ಕರ್ಮಾರ್ ಬಳಿಯ ನಿವಾಸಿ ಲಕ್ಷ್ಮಣ ಎಂಬುವವರ ಮನೆಗೆ ಸಿಡಿಲು ಬಡಿದು ಹಲವು ಭಾಗಗಳಿಗೆ ತೀವ್ರ ಹಾನಿಯಾಗಿದೆ.

ಸ್ಥಳಕ್ಕೆ ಭೇಟಿ ನೀಡಿದ ಶಾಸಕ ವೇದವ್ಯಾಸ ಕಾಮತ್ ಅವರು ಪರಿಶೀಲನೆ ನಡೆಸಿ ಸಿಡಿಲಿನಿಂದ ಹಾನಿಗೊಳಗಾದ ಮನೆಯ ಭಾಗದ ದುರಸ್ತಿಗೆ ತಕ್ಷಣವೇ ಸೂಕ್ತ ಪರಿಹಾರದ ಕ್ರಮ ಕೈಗೊಳ್ಳುವಂತೆ ಸ್ಥಳದಲ್ಲಿ ಹಾಜರಿದ್ದ ಗ್ರಾಮ ಲೆಕ್ಕಾಧಿಕಾರಿ, ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು. 

ಈ ಸಂದರ್ಭದಲ್ಲಿ ಸ್ಥಳೀಯ ಹಲವು ಬಿಜೆಪಿ ಪ್ರಮುಖರು ಉಪಸ್ಥಿತರಿದ್ದರು.




Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article