Mangalore: ರಮ್ಯಾ ಕೆ.ಆರ್.ಗೆ ಡಾಕ್ಟರೇಟ್ ಪದವಿ

Mangalore: ರಮ್ಯಾ ಕೆ.ಆರ್.ಗೆ ಡಾಕ್ಟರೇಟ್ ಪದವಿ


ಮಂಗಳೂರು: ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಉಪನ್ಯಾಸಕಿ ರಮ್ಯಾ ಕೆ.ಆರ್. ಅವರು ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯ ಪಿಎಚ್‌ಡಿ ಪದವಿ ನೀಡಿ ಗೌರವಿಸಿದೆ.

ವಿಶ್ವವಿದ್ಯಾನಿಲಯ ಕಾಲೇಜಿನ ವಾಣಿಜ್ಯ ವಿಭಾಗದ ಪ್ರಾಧ್ಯಾಪಕಿ ಪ್ರೊ. ಸುಭಾಷಿಣಿ ಶ್ರೀವತ್ಸ ಅವರ ಮಾರ್ಗದರ್ಶನದಲ್ಲಿ ಇವರು "Role of Financial Inclusion in Women Empowerment of Kudubi Community in Karnataka"ಎಂಬ ಪ್ರೌಢ ಪ್ರಬಂಧ ಸಿದ್ಧಪಡಿಸಿದ್ದರು.

ಸೌಭಾಗ್ಯ ನಿಲಯ, ಮಾರುತಿ ನಗರ ಬಡಾವಣೆ, ಹೊಸಬೆಟ್ಟು, ಸುರತ್ಕಲ್ ನ ನಿವಾಸಿಯಾಗಿರುವ  ರಮ್ಯಾ ಕೆ.ಆರ್, ದಕ್ಷಿಣ ರೈಲ್ವೇಯ ನಿವೃತ್ತ ಸ್ಟೇಷನ್ ಮ್ಯಾನೇಜರ್ ಕೆ. ರಾಮಯ್ಯ ಹಾಗೂ ಶಾರದಾ ದಂಪತಿಯ ಪುತ್ರಿ ಹಾಗೂ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಪೊಳಲಿ ಶಾಖೆಯ ಉದ್ಯೋಗಿ ಸಂತೋಷ್ ನಾಯ್ಕ್ ಅವರ ಪತ್ನಿ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article