
Moodubidire: ಕೆಸಿಇಟಿ 2024-ಆಳ್ವಾಸ್ ವಿದ್ಯಾರ್ಥಿಗಳ ಸಾಧನೆ
ಮೂಡುಬಿದಿರೆ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವೃತ್ತಿಪರ ಕೋರ್ಸಗಳ ಪ್ರವೇಶಕ್ಕಾಗಿ ನಡೆಸಿದ ಸಿಇಟಿ ಪರೀಕ್ಷೆಯಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆದಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಹೇಳಿದರು.
ಮೊದಲ 10 ರ್ಯಾಂಕ್ನಲ್ಲಿ ಇಬ್ಬರು, ಮೊದಲ 50ರಲ್ಲಿ ಒಂಬತ್ತು, ಮೊದಲ 100ರಲ್ಲಿ 21, ಮೊದಲ 200ರಲ್ಲಿ 48, 300ರಲ್ಲಿ 85, 400ರಲ್ಲಿ 117, 500ರಲ್ಲಿ 157, 1000ದ ಒಳಗೆ 516, 2000ದ ಒಳಗೆ 1084, 3000ದ ಒಳಗೆ 1773, 4000ದ ಒಳಗೆ 2107, 5000ದ ಒಳಗೆ 2656 ವಿದ್ಯಾರ್ಥಿಗಳು ರ್ಯಾಂಕ್ ಪಡೆದುಕೊಂಡಿದ್ದಾರೆ.
ಪ್ರಮುಖವಾಗಿ ಇಂಜಿನಿಯರಿಂಗ್ ವಿಭಾಗದಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಮೊದಲ 1000 ರ್ಯಾಂಕ್ಗಳಲ್ಲಿ 24 ವಿದ್ಯಾರ್ಥಿಗಳು, ಮೊದಲ 5000 ರ್ಯಾಂಕ್ನ ಒಳಗೆ ೨೭೩ ವಿದ್ಯಾರ್ಥಿಗಳು, ಮೊದಲ 10000 ರ್ಯಾಂಕ್ಗಳಲ್ಲಿ ಒಟ್ಟು 738 ವಿದ್ಯಾರ್ಥಿಗಳು ರ್ಯಾಂಕ್ನ್ನು ಪಡೆದಿದ್ದು, ಇವೆರೆಲ್ಲರೂ ರಾಜ್ಯದ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸೀಟು ಪಡೆಯಲು ಅರ್ಹತೆ ಪಡೆದಿದ್ದಾರೆ.
ವರುಣ್ ವಿ. ಪಶು ವೈದ್ಯಕೀಯದಲ್ಲಿ ೩ನೇ ರ್ಯಾಂಕ್, ಕೃಷಿಯಲ್ಲಿ 5 ರ್ಯಾಂಕ್, ಸಾಗರ್ ಕೃಷಿಯಲ್ಲಿ 12ನೇ ರ್ಯಾಂಕ್, ಪಶು ವೈದ್ಯಕೀಯ 37ನೇ ರ್ಯಾಂಕ್, ಪ್ರೀತಮ್ ಎನ್.ಎಸ್. ಪಶು ವೈದ್ಯಕೀಯ 36ನೇ ರ್ಯಾಂಕ್, ರಕ್ಷಿತಾ ಆರ್ ಕಾಪ್ಸೆ ಕೃಷಿಯಲ್ಲಿ 36ನೇ ರ್ಯಾಂಕ್, ಪಶು ವೈದ್ಯಕೀಯ 61ನೇ ರ್ಯಾಂಕ್, ವಿನಾಯಕ್ ಡಿ. ಮಾರಾಠೆ ಕೃಷಿಯಲ್ಲಿ 46ನೇ ರ್ಯಾಂಕ್, ಪಶು ವೈದ್ಯಕೀಯ 67ನೇ ರ್ಯಾಂಕ್, ಸುಚಿತಾ ಸಂಜು ಕೃಷಿಯಲ್ಲಿ 50ನೇ ರ್ಯಾಂಕ್, ಪಶು ವೈದ್ಯಕೀಯ 129ನೇ ರ್ಯಾಂಕ್, ವಿಕಾಸ್ ಪಾಟೀಲ್ ಕೃಷಿಯಲ್ಲಿ 66ನೇ ರ್ಯಾಂಕ್, ಪ್ರೀತಮ್ ಎಂ. ಕೃಷಿಯಲ್ಲಿ 43ನೇ ರ್ಯಾಂಕ್, ಪಶು ವೈದ್ಯಕೀಯ 93ನೇ ರ್ಯಾಂಕ್, ನ್ಯಾಚುರೋಪತಿಯಲ್ಲಿ 66ನೇ ರ್ಯಾಂಕ್, ನರ್ಸಿಂಗ್ನಲ್ಲಿ 9ನೇ ರ್ಯಾಂಕ್, ಇಂಜಿನಿಯರಿಂಗ್ನಲ್ಲಿ 440ನೇ ರ್ಯಾಂಕ್, ಸಿಂಚನಾ ಎಸ್ಸಿ ನ್ಯಾಚುರೋಪತಿಯಲ್ಲಿ 169ನೇ ರ್ಯಾಂಕ್, ಕೃಷಿಯಲ್ಲಿ ೧೪೫ನೇ ರ್ಯಾಂಕ್, ಪಶು ವೈದ್ಯಕೀಯದಲ್ಲಿ 191ನೇ ರ್ಯಾಂಕ್, ನರ್ಸಿಂಗ್ನಲ್ಲಿ 191ನೇ ರ್ಯಾಂಕ್, ನಮಿತ್ ಎ.ಪಿ. ಕೃಷಿಯಲ್ಲಿ 55ನೇ ರ್ಯಾಂಕ್, ನ್ಯಾಚುರೋಪತಿಯಲ್ಲಿ 156ನೇ ರ್ಯಾಂಕ್, ಪಶು ವೈದ್ಯಕೀಯದಲ್ಲಿ 274ನೇ ರ್ಯಾಂಕ್, ನರ್ಸಿಂಗ್ನಲ್ಲಿ 274ನೇ ರ್ಯಾಂಕ್, ಇಂಜಿನಿಯರಿಂಗ್ನಲ್ಲಿ 498ನೇ ರ್ಯಾಂಕ್, ಲಕ್ಷ್ಮಿ ಪಶು ವೈದ್ಯಕೀಯದಲ್ಲಿ 84ನೇ ರ್ಯಾಂಕ್, ದೀಪಾ ರಮೇಶ್ ಕೃಷಿಯಲ್ಲಿ 82ನೇ ರ್ಯಾಂಕ್, ರಜತ್ ಇಂಜಿನಿಯರಿಂಗ್ನಲ್ಲಿ 163ನೇ ರ್ಯಾಂಕ್, ದರ್ಶನ್ ಕುಮಾರ್ ಟಿ. ಕೃಷಿಯಲ್ಲಿ 83ನೇ ರ್ಯಾಂಕ್, ನ್ಯಾಚುರೋಪತಿಯಲ್ಲಿ 180ನೇ ರ್ಯಾಂಕ್, ಪಶು ವೈದ್ಯಕೀಯದಲ್ಲಿ 217ನೇ ರ್ಯಾಂಕ್, ನರ್ಸಿಂಗ್ನಲ್ಲಿ 271ನೇ ರ್ಯಾಂಕ್ ಪಡೆದು ಸಾಧನೆ ಮೆರೆದಿದ್ದಾರೆ.
ಪಿಸಿಬಿ ಹಾಗೂ ಪಿಸಿಎಮ್ನಲ್ಲಿ 772 ವಿದ್ಯಾರ್ಥಿಗಳು 141ರಲ್ಲಿ 100ಕ್ಕೂ ಅಧಿಕ ಅಂಕ ಪಡೆದುಕೊಂಡಿದ್ದಾರೆ.
ಪ್ರಾಂಶುಪಾಲ ಪ್ರೊ. ಎಮ್ ಸದಾಕತ್ ಉಪಸ್ಥಿತರಿದ್ದರು.