
Subramanya: ಕುಲ್ಕುಂದ ಬಳಿ ಕಾರು ಅಪಘಾತ, ಮುರಿದು ಬಿದ್ದ ವಿದ್ಯುತ್ ಕಂಬ
Sunday, June 23, 2024
ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಕುಲ್ಕುಂದ ಕಾಲೋನಿ ಬಳಿಯ ರೇಂಜ್ ಅಫೀಸ್ ಬಳಿ ಕಾರೊಂದು ಕರೆಂಟ್ ಕಂಬಕ್ಕೆ ಗುದ್ದಿ ಕರೆಂಟ್ ಕಂಬ ಮುರಿದು ಬಿದ್ದ ಘಟನೆ ಜೂ.16 ರಂದು ನಡೆದಿದೆ.
ಬೆಂಗಳೂರಿನ ಯಾತ್ರಿಕರು ಬಂದ ಕಾರು ಇದಾಗಿದ್ದು ಧರ್ಮಸ್ಥಳಕ್ಕೆ ಬಂದು ಸುಬ್ರಹ್ಮಣ್ಯಕ್ಕೆ ಬರುತಿದ್ದರೆನ್ನಲಾಗಿದೆ. ಅತಿ ವೇಗವಾಗಿ ಬಂದ ಕಾರು ಎದುರಿನಿಂದ ಬಂದ ವಾಹನಕ್ಕೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ನಿಂಯತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿದೆ. ಕಂಬ ಮುರಿದು ಬಿದ್ದು ವಿದ್ಯುತ್ ಸಂಪರ್ಕ ಕಡಿದು ಹೋಗಿದೆ.