Kateel: ಮದುವೆ ಇಷ್ಟವಿಲ್ಲದೆ ನದಿಗೆ ಹಾರಿ ಯುವತಿ ಆತ್ಮಹತ್ಯೆ

Kateel: ಮದುವೆ ಇಷ್ಟವಿಲ್ಲದೆ ನದಿಗೆ ಹಾರಿ ಯುವತಿ ಆತ್ಮಹತ್ಯೆ

ಕಟೀಲು: ಮದುವೆ ನಿಶ್ಚಯವಾಗಿದ್ದ ಯುವತಿಯೋರ್ವಳು ಕಟೀಲು ಮಚ್ಚಾರು ಸಮೀಪದಲ್ಲಿ ನಂದಿನಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ಬೆಳಿಗ್ಗೆ ಸಂಭವಿಸಿದೆ.

ಮೂಲ್ಕಿ ಸಮೀಪದ ಮೊಯಿಲೊಟ್ಟು ದಿ.ಪದ್ಮನಾಭ ಪೂಜಾರಿ ಎಂಬವರ ಮಗಳು ಸುಜಾತಾ (30) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.

ಈ ಮಧ್ಯೆ ಸುಜಾತಾ ಮೊಯಿಲೊಟ್ಟುವಿನ ತಮ್ಮ ಮನೆಯಿಂದ ಬಡಗ ಎಕ್ಕಾರು ಗ್ರಾಮದ ಮಚ್ಚಾರು ಎಂಬಲ್ಲಿ ಇರುವ ತಮ್ಮ ದೊಡ್ಡಮ್ಮನ ಮನೆಗೆ ಬಂದ್ದಿದ್ದವಳು ಬುಧವಾರ ಬೆಳಿಗ್ಗೆ ಮನೆಯ ಸಮೀಪದಲ್ಲಿಯೇ ನಂದಿನಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article