
Mangalore: ಹಿಂದೂ ಸಮುದಾಯದ ಮೇಲೆ ದ್ವೇಷ ಹೇಳಿಕೆ-ವಿಶ್ವ ಹಿಂದೂ ಪರಿಷತ್ ತೀವ್ರಖಂಡನೆ: ರಾಹುಲ್ ಗಾಂಧಿ ರಾಜೀನಾಮೆಗೆ ಆಗ್ರಹ
ಮಂಗಳೂರು: ದೇಶದ ಅತ್ಯುನ್ನತ ಪ್ರಜಾಸತ್ತಾತ್ಮಕ ಸಂಸ್ಥೆಯಾದ ಲೋಕಸಭೆಯಲ್ಲಿ ವಿರೋಧ ಪಕ್ಷ ನಾಯಕನಾಗಿ ರಾಹುಲ್ ಗಾಂಧಿ 'ಹಿಂದುಗಳೆಂದು ಹೇಳಿಕೊಳ್ಳುವವರು ನಿತ್ಯ ಹಿಂಸೆ ಮತ್ತು ದ್ವೇಷದಲ್ಲಿ ತೊಡಗಿದ್ದಾರೆ' ಎಂಬ ಹೇಳಿಕೆಯ ಮೂಲಕ ದೇಶದ ಸಮಸ್ತ ಹಿಂದೂ ಸಮಾಜ ಬಾಂಧವರನ್ನು ಉದ್ದೇಶಪೂರ್ವಕ ಅಪಮಾನ ಮಾಡಿರುವುದನ್ನು ವಿಶ್ವ ಹಿಂದೂ ಪರಿಷತ್ ಖಂಡಿಸುತ್ತಿದೆ. ಅವರು ಈ ಕೂಡಲೇ ಸಂಸದ ಸ್ಥಾನಕ್ಕೆ ರಾಜಿನಾಮೆ ನೀಡಬೇಕಾಗಿ ಪ್ರಕಟಣೆಯಲ್ಲಿ ಆಗ್ರಹಿಸಿದೆ.
ಬಹುತೇಕ ಹಿಂದೂಗಳ ಮತಗಳಿಂದ ಆಯ್ಕೆಯಾಗಿರುವ ಈ ರಾಹುಲ್ ಗಾಂಧಿಯವರು ತಮಗೆ ಜನರು ಆಯ್ಕೆ ಮಾಡಿ ಕಳಿಸಿದ ಸ್ಥಾನದ ದುರುಪಯೋಗ ಮಾಡಿರುವುದರಿಂದ ಲೋಕಸಭೆಯಲ್ಲಿ ಅಭಿವೃದ್ಧಿ ಉತ್ತಮ ಆಡಳಿತದ ಬಗ್ಗೆ ಮಾತನಾಡಲು ಸಿಕ್ಕ ಅವಕಾಶವನ್ನು ಹಿಂದುಗಳ ಅವಹೇಳನ ಮಾಡಿ ತನ್ನೊಳಗೆ ಹುದುಗಿರುವ ದ್ವೇಷ ಪೂರ್ವಕ ವ್ಯಕ್ತಿತ್ವವನ್ನು ಹೊರಗೆ ಹಾಕುತ್ತಿದ್ದಾರೆ. ದೇಶದ ಬಹು ಸಂಖ್ಯಾತರನ್ನು ದ್ವೇಷಿಸಿ ಹೀಯಾಳಿಸುವವರು ಲೋಕಸಭಾ ಸದಸ್ಯನಾಗಲು ನೈತಿಕವಾಗಿ ಅನರ್ಹನಾಗಿರುವುದರಿಂದ ತಕ್ಷಣ ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ವಿಶ್ವ ಎಂದು ಪರಿಷತ್ ಆಗ್ರಹಿಸಿದೆ.
ಬಹುಸಂಖ್ಯಾತ ಹಿಂದೂಗಳಿಗೆ ಮಾಡಿದ ಅಪಮಾನಕ್ಕಾಗಿ ರಾಹುಲ್ ಗಾಂಧಿಯ ಮೇಲೆ ಲೋಕಸಭಾ ಸ್ಪೀಕರ್ ಸೂಕ್ತವಾದಂತಹ ಕ್ರಮವನ್ನು ಕೈಗೊಳ್ಳಬೇಕಾಗಿ ವಿಶ್ವ ಹಿಂದೂ ಪರಿಷದ್ ಜಿಲ್ಲಾಧ್ಯಕ್ಷ ಎಚ್.ಕೆ. ಪುರುಷೋತ್ತಮ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.