ದ.ಕ. ಜಿಲ್ಲೆಯಲ್ಲಿ ಬಿಡುವುಕೊಟ್ಟ ಮಳೆ: ಎಂದಿನಂತೆ ಮುಂದುವರೆದ ಸಂಚಾರ
Sunday, July 21, 2024
ಮಂಗಳೂರು: ಜಿಲ್ಲೆಯಾಧ್ಯಂತ ವಾಹನ ಸಂಚಾರ ನಡೆಯುತ್ತಿದೆ. ಮಂಗಳೂರು-ಬೆಂಗಳೂರು ಸಂಪರ್ಕದ ಪ್ರಮುಖ ಕೊಂಡಿ ಶಿರಾಡಿ ಘಾಟಿಯಲ್ಲಿ ಹಗಲಿನ ವೇಲೆ ಎಲ್ಲಾ ರೀತಿಯ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡಲಾಗಿದೆ. ರಾತ್ರಿ ವೇಳೆ ನಿರ್ಬಂಧ ಮುಂದುವರಿದಿದೆ.
ಮಂಗಳೂರು-ಮಡಿಕೇರಿ ಘಾಟಿ ಕೂಡ ನಿರ್ಬಂಧ ಮುಂದುವರಿದಿದೆ. ಶಿರಾಡಿಯಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿರುವುದ್ದಾಕ್ಕಾಗಿ ಚಾರ್ಮಾಡಿ ಘಾಟ್ ಮೇಲೆ ತುಸು ಒತ್ತಡ ಕಡಿಮೆಯಾಗಿದೆ.
ವಿಮಾನ ಹಾಗೂ ರೈಲು ಸಂಚಾರ ಎಂದಿನಂತಿದೆ. ಮಂಗಳೂರು-ಬೆಂಗಳೂರು ನಡುವೆ ಹೆಚ್ಚುವರಿಯಾಗಿ ಎರಡು ವಿಶೇಷ ರೈಲುಗಳನ್ನು ಓಡಿಸಲಾಗುತ್ತಿದೆ. ಆಂಕೋಲಾ ಗುಡ್ಡ ಕುಸಿತದ ಹಿನ್ನೆಲೆಯಲ್ಲಿ ಮಂಗಳೂರು-ಗೋವಾ ನಡುವಿನ ಸಂಚಾರ ವ್ಯತ್ಯಾಯವಾಗಿದೆ. ಆದ್ದರಿಂದ ಮಂಗಳೂರು-ಮಡಘಾಂವ್ ನಡುವೆ ಹೆಚ್ಚುವರಿ ರೈಲು ಓಡುತ್ತಿದೆ.