ಅಶ್ವತ್ಥಪುರ ಯಕ್ಷಚೈತನ್ಯ ವಿಂಶತಿ ಸಂಭ್ರಮ: ಕಲಾವಿದರಿಗೆ ಸಮ್ಮಾನ, ತಾಳಮದ್ದಳೆ

ಅಶ್ವತ್ಥಪುರ ಯಕ್ಷಚೈತನ್ಯ ವಿಂಶತಿ ಸಂಭ್ರಮ: ಕಲಾವಿದರಿಗೆ ಸಮ್ಮಾನ, ತಾಳಮದ್ದಳೆ

ಮೂಡುಬಿದಿರೆ: ಅಶ್ವತ್ಥಪುರ ಯಕ್ಷ ಚೈತನ್ಯದ 'ವಿಂಶತಿ ಸಂಭ್ರಮ'ದಂಗವಾಗಿ ಮೂರು ತಾಳಮದ್ದಳೆ, ಕಲಾವಿದರಿಗೆ ಸಮಾನ, ಯಕ್ಷನಿಧಿ ಸಮರ್ಪಣೆ, ಪ್ರತಿಭಾ ಪುರಸ್ಕಾರ ನಡೆಯಿತು.
ಸಭಾ ಕಾರ್ಯಕ್ರಮದಲ್ಲಿ ಹಿರಿಯ ಭಾಗವತ ರಘುರಾಮ ಹೊಳ್ಳ, ಕಲಾವಿದ ಜಬ್ಬಾರ್ ಸಮೋ ಅವರನ್ನು ಸಮ್ಮಾನಿಸಲಾಯಿತು.
ಯಕ್ಷಗಾನ ಕಲಾವಿದ, ಬರೆಹಗಾರ ರವಿಶಂಕರ ಭಟ್ ವಳಕ್ಕುಂಜ ಅವರಿಗೆ ವಿಶೇಷ ಗೌರವ ನೀಡಲಾಯಿತು. ಹಿರಿಯ ಮದ್ದಳೆವಾದಕ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರಿಗೆ ಯಕ್ಷನಿಧಿ ಸಮರ್ಪಿಸಲಾಯಿತು. ಕರಾಟೆ ಪಟುವಾಗಿ 50ಕ್ಕೂ ಅಧಿಕ ಪದಕಗಳನ್ನು ಶ್ರೀ ಸೀತಾರಾಮಚಂದ್ರ ದೇವಸ್ಥಾನದ ಪಡೆದಿರುವ, ಕಿರಿಯ ತೀರ್ಪುಗಾರನೂ ಆಗಿ ಮಿಂಚುತ್ತಿರುವ ಮಂಗಳೂರಿನ ಆದ್ಯ ಅನಿಲ್ ಕುಮಾರ್ ಮಾಯಣ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಪುರಸ್ಕರಿಸಲಾಯಿತು.
ನಿವೃತ್ತ ಮುಖ್ಯಶಿಕ್ಷಕ ಕೃಷ್ಣಮೂರ್ತಿ ವಿ.ಎ. ಅವರ ಅಧ್ಯಕ್ಷತೆ ವಹಿಸಿದ್ದರು.
 ಜಬ್ಬಾ‌ರ್ ಸಮೋ ಅವರು ಸಮ್ಮಾನಿತರೆಲ್ಲರ ಪರವಾಗಿ ಮಾತನಾಡಿದರು. ಅಭ್ಯಾಗತರಾಗಿ ಶ್ರೀ ಸೀತಾರಾಮಚಂದ್ರ ದೇವಸ್ಥಾನದ ಆಡಳಿತ ಮೊಕ್ತಸರ ರಘುನಾಥ ಎಲ್.ವಿ., ಯಕ್ಷಗಾನ ಸಂಘಟಕ ಭುಜಬಲಿ ಧರ್ಮಸ್ಥಳ ಭಾಗವಹಿಸಿ ಸಂಘಟಕರ ಕಲಾಪ್ರೇಮವನ್ನು ಕೊಂಡಾಡಿದರು. ಗೌರವಾಧ್ಯಕ್ಷ ವೇ.ಮೂ. ಕೆ. ಪ್ರಭಾಕರ ಭಟ್ ಉಪಸ್ಥಿತರಿದ್ದರು. 
ಚೈತನ್ಯ ಮಂಗೇಬೆಟ್ಟು, ಸಂಚಾಲಕ ಸದಾಶಿವ ನೆಲ್ಲಿಮಾರ್, ಸುರೇಂದ್ರ ಭಟ್ ಪತ್ರಗಳನ್ನು ವಾಚಿಸಿದರು.'ಯಕ್ಷ ಚೈತನ್ಯ'ದ ಅಧ್ಯಕ್ಷ ಕೃಷ್ಣಮೂರ್ತಿ ಕಟೀಲು ಸ್ವಾಗತಿಸಿ, ಶಿವದತ್ತ ನಿರೂಪಿಸಿ, ಕಾರ್ಯದರ್ಶಿ ಕೃಷ್ಣಮೂರ್ತಿ ಮಾಯಣ ವಂದಿಸಿದರು. ಕಿರಣ್ ಮಂಜನಬೈಲು ಸನ್ಮಾನ ಪತ್ರ ವಾಚಿಸಿದರು.

'ವಿಂಶತಿ ಉತ್ಸವದಂಗವಾಗಿ ಬೆಳಗ್ಗೆ 9ರಿಂದ ಯಕ್ಷಚೈತನ್ಯ ಕಲಾವಿದರಿಂದ 'ಶ್ರೀ ಕೃಷ್ಣ ಸಂಧಾನ', ಮಧ್ಯಾಹ್ನ 2ರಿಂದ ಕಾರ್ಕಳದ ಅನಂತಶಯನ బంటె ಆಡಳಿತ ಮೊಕ್ತಸರ ರಘುನಾಥ ಎಲ್ ಮಹಿಳಾ ಯಕ್ಷಕಲಾ ಮಂಡಳಿಯವರಿಂದ ವಿ., ಯಕ್ಷಗಾನ ಸಂಘಟಕ ಭುಜಬಲಿ 'ವಾಮನ ಚರಿತ್ರೆ' ತಾಳಮದ್ದಳೆ ಹಾಗೂ ಧರ್ಮಸ್ಥಳ ಭಾಗವಹಿಸಿ ಸಂಘಟಕರ ಹೊಳ್ಳ ಪದ್ಯಾಣ, ಬೊಳಿಂಜಡ್ಕ ಕಲಾಪ್ರೇಮವನ್ನು ಕೊಂಡಾಡಿದರು. ಕೊಂಕಣಾಜೆ, ಅಲೆವೂರಾಯ, ಜಬ್ಬಾರ್, ಗೌರವಾಧ್ಯಕ್ಷ ವೇ.ಮೂ. ಕೆ. ಪ್ರಭಾಕರ ವಾಟೆಪಡ್ಡು ವಳಕ್ಕುಂಜ, ಕಿರಣ್ ಚೈತನ್ಯ ಕೆರೆ, ಕನ್ನಡಿಕಟ್ಟೆ ಮಾಯಣ ಇವರ ಸದಾಶಿವ ಕೂಡುವಿಕೆಯಿಂದ 'ಕೀಚಕ ವಧೆ' ಸಮ್ಮಾನ ತಾಳಮದ್ದಳೆ ಸಂಯೋಜಿಸಲಾಗಿತ್ತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article