ಧರ್ಮಸ್ಥಳದಲ್ಲಿ ಪುತ್ತೂರಿನ ‘ಗಾನಸಿರಿ’ ಕಲಾವಿದರಿಂದ ಸಂಗೀತ ಕಾರ್ಯಕ್ರಮ
Sunday, October 6, 2024
ಉಜಿರೆ: ನವರಾತ್ರಿ ಪ್ರಯುಕ್ತ ಶುಕ್ರವಾರ ರಾತ್ರಿ ಧರ್ಮಸ್ಥಳದಲ್ಲಿ ಪ್ರವಚನ ಮಂಟಪದಲ್ಲಿ ಪುತ್ತೂರಿನ ಗಾನಸಿರಿ ಕಲಾಕೇಂದ್ರದ ಡಾ. ಕಿರಣ್ಕುಮಾರ್ ಮತ್ತು ಬಳಗದವರು ಸಂಗೀತ ಕಾರ್ಯಕ್ರಮ ನೀಡಿದರು.
ಶ್ರೀಲಕ್ಷೀ, ಎಸ್., ಸೃಜನ ಪೂಜಾರಿ, ಮನಸ್ವಿ, ಮಾಸ್ಟರ್ ಅಚಿಂತ್ಯ ಸಹಕಲಾವಿದರಾಗಿ ಸಹಕರಿಸಿದರು. ತಬಲ ವಾದಕರಾಗಿ ಸುದರ್ಶನ ಆಚಾರ್ಯ, ಹಾರ್ಮೋನಿಯಂ ವಾದಕರಾಗಿ ದಿವ್ಯಾನಿಧಿ ರೈ ಸಹಕರಿಸಿದರು.



