ಮೂಡುಬಿದಿರೆ: ಯುವಸಂಗಮ ಕಾಂತಾವರ (ರಿ.) ವತಿಯಿಂದ 6ನೇ ವರ್ಷದ ಗೋಪೂಜೆ ಹಾಗೂ ಸಾಮೂಹಿಕ ವಾಹನ ಪೂಜೆಯು ಬಾಲಕೃಷ್ಣ ಭಟ್ ಜಾಕಿಬೆಟ್ಟು ಇವರ ಪೌರೋಹಿತ್ಯದಲ್ಲಿ ಮಿತ್ತಲಚ್ಚಿಲು ವಠಾರದಲ್ಲಿ ಜರಗಿತು.
ಈ ಸಂದರ್ಭದಲ್ಲಿ ಊರ ನಾಗರಿಕರು ಹಾಗೂ ಯುವಸಂಗಮ ಕಾಂತಾವರದ ಪದಾಧಿಕಾರಿಗಳು ಹಾಗೂ ಸರ್ವಸದಸ್ಯರು ಉಪಸ್ಥಿತರಿದ್ದರು.