
ಬೆಳಗಾವಿ ಎಐಸಿಸಿ ಅಧಿವೇಶನ ಹಿನ್ನೆಲೆ: ಗಾಂಧೀಜಿ ಖಾದಿ ಉದ್ಯಮ ಪ್ರಾರಂಭಿಸಿದ್ದ ಹುದುಲಿ ಗ್ರಾಮಕ್ಕೆ ಭೇಟಿ
Thursday, December 26, 2024
ಬೆಳಗಾವಿ: ಮಹಾತ್ಮ ಗಾಂಧೀಜಿ ನೇತೃತ್ವದಲ್ಲಿ ನಡೆದಿದ್ದ ಬೆಳಗಾವಿ ಅಧಿವೇಶನಕ್ಕೆ ನೂರು ವರ್ಷಗಳು ತುಂಬಿರುವ ಹಿನ್ನೆಲೆಯಲ್ಲಿ ನಡೆಯುತ್ತಿರುವ ಬೆಳಗಾವಿ ಅಧಿವೇಶನ ಹಿನ್ನೆಲೆಯಲ್ಲಿ 1937ರ ಡಿಸೆಂಬರ್ 17ರಿಂದ 24 ರವರೆಗೆ ಮಹಾತ್ಮ ಗಾಂಧೀಜಿ ಅವರು ಭೇಟಿ ನೀಡಿ ಖಾದಿ ಉದ್ಯಮವನ್ನು ಶುರುಮಾಡಿದ್ದ ಹುದುಲಿ ಗ್ರಾಮಕ್ಕೆ ಇಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೆವಾಲರವರ ಆದೇಶದ ಮೇರೆಗೆ ಸರಕಾರದ ಪರವಾಗಿ ಸಚಿವ ರಹಿಮ್ ಖಾನ್, ಪಕ್ಷದ ಪರವಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಶಾಸಕ ಮಂಜುನಾಥ ಭಂಡಾರಿ, ಶಾಸಕ ನರೇಂದ್ರ ಸ್ವಾಮಿ ಹಾಗೂ ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ನಾರಾಯಣಸ್ವಾಮಿ, ಬಾಲರಾಜ್ ನಾಯ್ಕ್ ಮತ್ತು ಸತ್ಯನಾರಾಯಣರವರು ಭೇಟಿ ನೀಡಿದರು.