
ಮಾಜಿ ಸಚಿವ ಅಮರನಾಥ ಶೆಟ್ಟಿಯವರ ಸಹೋದರ ರತ್ನಾಕರ ಶೆಟ್ಟಿ ಮುಂಡ್ರೆದಗುತ್ತು ನಿಧನ
Tuesday, December 31, 2024
ಮಂಗಳೂರು: ಮಾಜಿ ಶಾಸಕ ಕೆ. ಅಮರನಾಥ ಶೆಟ್ಟಿ ಅವರ ಕಿರಿಯ ಸಹೋದರ, ವಿಜಯಬ್ಯಾಂಕ್ ನ ನಿವೃತ್ತ ಅಧಿಕಾರಿ ರತ್ನಾಕರ ಶೆಟ್ಟಿ ಮುಂಡ್ರುದೆಗುತ್ತು (70) ಅವರು ಡಿ. 31 ರಂದು ಬೆಂಗಳೂರಿನ ಸ್ವಗೃಹದಲ್ಲಿ ನಿಧನ ಹೊಂದಿದರು.
ಮೃತರು ಪತ್ನಿ, ಮತ್ತು ಪುತ್ರಿಯನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಜ.1 ರಂದು ಮಧ್ಯಾಹ್ಬ 12 ಗಂಟೆಗೆ ಮೂಡಬಿದ್ರೆ ಪಾಲಡ್ಕದ ಮುಂಡ್ರುದೆಗುತ್ತು ಮನೆಯಲ್ಲಿ ನಡೆಯಲಿದೆ.
ಮೂಡಬಿದ್ರೆಯಲ್ಲಿ ಶಿಕ್ಷಣ ಮುಗಿಸಿದ ಬಳಿಕ ವಿಜಯ ಬ್ಯಾಂಕ್ ನಲ್ಲಿ ಉದ್ಯೋಗಕ್ಕೆ ಸೇರಿದ ಅವರು ವಿವಿಧ ಶಾಖೆಗಳಲ್ಲಿ ಪ್ರಮುಖ ಹುದ್ದೆಗಳನ್ನು ನಿಭಾಯಿಸಿದ್ದರು. ಅಣ್ಣ ಅಮರನಾಥ ಶೆಟ್ಟರ ನಿಧನದ ಬಳಿಕ ಕುಟುಂಬದ ಎಲ್ಲಾ ವ್ಯವಹಾರಗಳಲ್ಲಿ ಹೆಚ್ಚು ಸಕ್ರಿಯರಾಗಿದ್ದರು.