ಭತ್ತ ಸಾಗಾಟ ಲಾರಿಗೆ ಬೆಂಕಿ

ಭತ್ತ ಸಾಗಾಟ ಲಾರಿಗೆ ಬೆಂಕಿ

ಸುಳ್ಯ: ಭತ್ತ ಸಾಗಾಟ ಲಾರಿಯೊಂದು ಬೆಂಕಿಗೆ ಆಹುತಿಯಾದ ಘಟನೆ ಕೊಡಗು ಜಿಲ್ಲೆಯ ಜೋಡುಪಾಲ ಸಮೀಪ ಶನಿವಾರ ತಡರಾತ್ರಿಯಲ್ಲಿ ನಡೆದಿರುವುದು ವರದಿಯಾಗಿದೆ.

ಈ ಲಾರಿ ಎಚ್.ಡಿ. ಕೋಟೆಯಿಂದ ಉಡುಪಿಗೆ ಭತ್ತವನ್ನು ಸಾಗಿಸುತ್ತಿತ್ತೆನ್ನಲಾಗಿದೆ. ಲಾರಿಯು ಜೋಡುಪಾಲ ತಲುಪಿದಾಗ ಲಾರಿಯಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಚಾಲಕ ಹಾಗೂ ಕ್ಲೀನರ್ ಲಾರಿಯನ್ನು ರಸ್ತೆ ಪಕ್ಕ ನಿಲ್ಲಿಸಿ, ಕೆಳಗಿಳಿದು ಪಾರಾಗಿದ್ದಾರೆ. ಈ ಘಟನೆಯಿಂದ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತ್ತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article