ಪೊಲೀಸರ ಕರ್ತವ್ಯಕ್ಕೆ ಅಡ್ಡಿ: ಯುವಕ ಬಂಧನ

ಪೊಲೀಸರ ಕರ್ತವ್ಯಕ್ಕೆ ಅಡ್ಡಿ: ಯುವಕ ಬಂಧನ

ಕಾರ್ಕಳ: ಟಿಪ್ಪರ್‌ವೊಂದರಲ್ಲಿ ಮರಳನ್ನು ಅಕ್ರಮ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಲು ಮುಂದಾಗಿದ್ದ ಪೊಲೀಸರ ಕರ್ತವ್ಯಕ್ಕೆ ಅಡ್ಡಪಡಿಸಿದ್ದ ಆರೋಪಿಯೊಬ್ಬನನ್ನು ಕಾರ್ಕಳ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. 

ಕಾರ್ಕಳ ಕುಕ್ಕುಂದೂರು ಜಯಂತಿನಗರದ ಸೈಯದ್ ಸೈಫ್( 22) ಬಂಧಿತ ಆರೋಪಿ. ಪ್ರತಿಷ್ಠಿತ ಮನೆತನದ ಈತ ಅಮಲು ಪದಾರ್ಥ ಸೇವನೆ ಚಟವೊಂದಿದ್ದು, ಮಣಿಪಾಲ ಪ್ರತಿಷ್ಠಿತ ಕಾಲೇಜಿನ ಬಿ ಫಾರ್ಮಸಿಯ ವಿದ್ಯಾರ್ಥಿಯಾಗಿದ್ದಾನೆ. ಈತನನ್ನು ಕಾರ್ಕಳ ನಗರ ಠಾಣಾಧಿಕಾರಿ ಶಿವಕುಮಾರ್ ಬಂಧಿಸಿದ್ದಾರೆ.

ಮರಳು ಕಳವು ಹಾಗೂ ಪೊಲೀಸರ ಕರ್ತವ್ಯ ಅಡ್ಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಕಳ ಕುಕ್ಕುಂದೂರು ಜಯಂತಿನಗರದ ಸೈಯದ್ ಸೈಫ್( 22)ನನ್ನು ಪೊಲೀಸರು ದಸ್ತಗಿರಿ ಮಾಡಿದರು.

ಆ ಸಂದರ್ಭದಲ್ಲಿ ಆರೋಪಿ ಸೈಯದ್ ಸೈಫ್ ಯಾವುದೋ ಅಮಲು ಪದಾರ್ಥ ಸೇವಿಸಿದಂತೆ ವರ್ತನೆ ಮಾಡುತ್ತಿದ್ದನು. ಅನುಮಾನಗೊಂಡ ಪೊಲೀಸರು ಆತನನ್ನು ಮಾದಕ ವಸ್ತು ಸೇವನೆ ಮಾಡಿದ ಬಗ್ಗೆ ಪರೀಕ್ಷಿಸಿ ನಡೆಯಿಸಿ ದೃಡಪತ್ರ ನೀಡುವಂತೆ ಕೋರಿ ಜ.14 ರಂದು ಕಾರ್ಕಳ ತಾಲೂಕು ಸರಕಾರಿ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿಯವರ ಮುಂದೆ ಹಾಜರುಪಡಿಸಿದ್ದರು.

ವೈದ್ಯಕೀಯ ವರದಿಯಂತೆ ಆರೋಪಿ ಸೈಯದ್ ಸೈಫ್ ಮಾದಕ ಹಾಗೂ ಮನೋದ್ರೇಕಕಾರಿ ವಸ್ತು ಗಾಂಜಾದ ಉತ್ಪನ್ನವಾದ ಟೆಟ್ರಾ ಹೈಡ್ರೋ ಕ್ಯಾನ್ ಬಿಲ್ ಪದಾರ್ಥ ಸೇವಿಸಿರುವುದು ದೃಢಪಟ್ಟಿದೆ.

ಕಾರ್ಕಳದ ಕುಕ್ಕುಂದೂರು ಗ್ರಾಮದ ಸರ್ವಜ್ನ ಸರ್ಕಲ್ ಬಳಿಯಲ್ಲಿ ನಗರ ಠಾಣಾಧಿಕಾರಿ ಸಂದೀಪ್ ಕುಮಾರ್ ಶೆಟ್ಟಿ ಕರ್ತವ್ಯ ನಿರತರಾಗಿದ್ದರು. ವಾಹನ ತಪಾಸಣೆ ಮಾಡುತ್ತಿರುವಾಗ ಕೆಎ.19 ಡಿ. 9245 ನೇ ನಂಬ್ರದ ಟಿಪ್ಪರ ಲಾರಿಯಲ್ಲಿ ಮರಳನ್ನು ಕಳವು ಮಾಡಿಕೊಂಡು ಸಾಗಾಟ ಮಾಡಲಾಗುತ್ತಿತ್ತು.

ಕಳವು ಮಾಡಿದ ಮರಳನ್ನು ಸಾಗಾಟ ಮಾಡುತ್ತಿದ್ದ ಟಿಪ್ಪರ್ ಲಾರಿಗೆ ಅನುಕೂಲವಾಗುವಂತೆ ಹಾಗೂ ಪೊಲೀಸ್ ಇಲಾಖಾ ವಾಹನಕ್ಕೆ ಪ್ರತಿಬಂಧವನ್ನು ಉಂಟು ಮಾಡಲು ಕೆಎ-19 ಎಂಬಿ 7472 ನೇ ನಂಬ್ರದ ರಿಡ್ಜ್ ಕಾರು ಚಾಲಕ ಮುಂದಾಗಿದ್ದನು. ಪೊಲೀಸರು ಟಿಪ್ಪರ್ ಲಾರಿಯನ್ನು ಬೆನ್ನಟ್ಟುವ ಸಂದರ್ಭದಲ್ಲಿ ರಿಡ್ಜ್ ಕಾರಿನ ಚಾಲಕನು ಒಮ್ಮೆಲೇ ಪೊಲೀಸ್ ಇಲಾಖಾ ವಾಹನದ ಮುಂದೆ ಚಲಾಯಿಸಿ ಕೊಂಡು ಹೋಗಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದನು.

ಆರೋಪಿತರು ಸಂಘಟಿತರಾಗಿ ಕೃತ್ಯ ಉಂಟು ಮಾಡಿ ಪೊಲೀಸರ ಕರ್ತವ್ಯಕ್ಕೆ ತಡೆಯುಂಟು ಮಾಡಿರುವ ಕುರಿತು ನಗರ ಠಾಣಾ ಪ್ರಕರಣ ದಾಖಲಾಗಿತ್ತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article