
ಇಂದು ಬ್ರಹ್ಮರಾಕ್ಷಸ ಉಚ್ಚಾಟನೆ: ರಾತ್ರಿ ವಾಹನ ಸಂಚಾರ ನಿಷೇಧ..
Wednesday, January 29, 2025
ಮಂಗಳೂರು: ಮಹಾದೈವರಾಜ ಕೋಟೆದ ಉಬ್ಬುಸ್ವಾಮಿ ದೈವಸ್ಥಾನ ದೇರೆಬೈಲು, ಕೊಟ್ಟಾರದಲ್ಲಿ ಜ.29ರ ರಾತ್ರಿ 12 ಗಂಟೆಗೆ (ರಣಕಾಟ) ಉಚ್ಚಾಟನೆ ಹಾಗೂ (ಬ್ರಹ್ಮರಾಕ್ಷಸ) ಅನ್ಯಪ್ರೇತ ಉಚ್ಚಾಟನೆ ನಡೆಯಲಿದೆ. ಹೀಗಾಗಿ ರಾತ್ರಿ 10ರಿಂದ ಬೆಳಿಗ್ಗೆ 5 ಗಂಟೆಯವರೆಗೆ ರಸ್ತೆಯಲ್ಲಿ ಯಾರು ಓಡಾಡಬಾರದೆಂದು ವಿನಂತಿ ಮಾಡಿರುವ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಜ.29ರಂದು ರಾತ್ರಿ ಕೊಟ್ಟಾರ ಪ್ರಮುಖ ರಸ್ತೆಯಲ್ಲಿ ರಾತ್ರಿ ವಾಹನ ಸಂಚಾರ ನಿಷೇದ ಮಾಡಲಾಗುವುದು. ಪೂಜಾ ವಿಧಿ ವಿಧಾನವನ್ನು ನೋಡುವ ಆಸಕ್ತಿ ಉಳ್ಳ ಭಕ್ತರು ರಾತ್ರಿ 11 ಗಂಟೆಯ ಒಳಗೆ ದೈವಸ್ಥಾನಕ್ಕೆ ಬಂದು ಸೇರತಕ್ಕದ್ದು ಎಂದು ದೈವಸ್ಥಾನದ ಆಡಳಿತ ಮಂಡಳಿ ಮನವಿ ಮಾಡಿದೆ.