
ಆರಂಬೋಡಿ ನದಿಗೆ ಬಿದ್ದು 10ನೇ ತರಗತಿ ವಿದ್ಯಾರ್ಥಿ ಸಾವು
Monday, February 24, 2025
ಬೆಳ್ತಂಗಡಿ: ನದಿಗೆ ಬಿದ್ದು ಹತ್ತನೇ ತರಗತಿ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ ಘಟನೆ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಆರಂಬೋಡಿ ಎಂಬಲ್ಲಿ ಫೆ.23 ರ ಮಧ್ಯಾಹ್ನ ನಡೆದಿದೆ.
ರಾಮಕುಂಜ ಎಂಬಲ್ಲಿಯ ಹತ್ತನೇ ತರಗತಿಯಲ್ಲಿ ಕಲಿಯುತಿದ್ದ ವಿದ್ಯಾರ್ಥಿ ಪವನ್ (16) ಎಂದು ಗುರುತಿಸಲಾಗಿದೆ.
ಆರಂಬೋಡಿಯಲ್ಲಿರುವ ಅಜ್ಜಿ ಮನೆಯಿಂದ ಸಿದ್ಧಕಟ್ಟೆಯ ಶಾಲೆಗೆ ಹೋಗುತಿದ್ದು, ಭಾನುವಾರ ಮನೆ ಸಮೀಪದ ಫಲ್ಗುಣಿ ನದಿಯತ್ತ ಹೋಗಿದ್ದು ಈ ವೇಳೆ ಜಾರಿ ಬಿದ್ದು ಸಾವನ್ನಪ್ಪಿದ್ದು, ಮೃತ ದೇಹವನ್ನು ಬೆಳ್ತಂಗಡಿ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಿಳಿದು ಬಂದಿದೆ.