ಸಾಗರ: ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ವರದಳ್ಳಿಯ ಶ್ರೀ ಕ್ಷೇತ್ರ ಶ್ರೀಧರಾಶ್ರಮದಲ್ಲಿ ಫೆ.13 ರಂದು ಭಗವಾನ್ ಸದ್ಗುರು ಶ್ರೀ ಶ್ರೀಧರ ಸ್ವಾಮಿಗಳವರ ದಿವ್ಯ ಸಮಾಧಿ ಮತ್ತು ಪಾದುಕೆಗಳಿಗೆ 'ಕೇಸರಿ ಗಂಧ ಲೇಪನ ಅಲಂಕಾರ' ಪೂಜೆಯೊಂದಿಗೆ ಮಹಾ ಮಂಗಳಾರತಿ ಮಾಡಲಾಯಿತು.
ಈ ಸಂದರ್ಭದಲ್ಲಿ ನೂರಾರು ಭಕ್ತರು ಶ್ರೀಧರ ಸ್ವಾಮಿಗಳವರ ದರ್ಶನ ಪಡೆದು ಅನ್ನ ಸಂತರ್ಪಣೆ ಸ್ವೀಕರಿಸಿದರು.