ಜೈಲ್ ಸ್ಥಳಾಂತರ-ಮೊದಲ ಹಂತದ ಕಾಮಗಾರಿಗೆ 110 ಕೋಟಿ: ಐವನ್ ಡಿ’ಸೋಜಾ

ಜೈಲ್ ಸ್ಥಳಾಂತರ-ಮೊದಲ ಹಂತದ ಕಾಮಗಾರಿಗೆ 110 ಕೋಟಿ: ಐವನ್ ಡಿ’ಸೋಜಾ

ಮಂಗಳೂರು: ನಗದ ಕೊಡಿಯಾಲಬೈಲಿನಲ್ಲಿರುವ ಜಿಲ್ಲಾ ಕಾರಾಗೃಹವನ್ನು ಬಂಟ್ವಾಳ ತಾಲೂಕಿನ ಚೇಳೂರು ಮತ್ತು ಕುರ್ನಾಡು ಗ್ರಾಮಕ್ಕೆ ಸ್ಥಳಾಂತರಿಸುವ ನಿಟ್ಟಿನಲ್ಲಿ ಮೊದಲ ಹಂತದ 110 ಕೋ.ರೂ. ಮೊತ್ತದ ಕಾಮಗಾರಿ ಬಿಡುಗಡೆಗೊಂಡು ಲೋಕೋಪಯೋಗಿ ಇಲಾಖೆಯಿಂದ ಕಾಮಗಾರಿ ನಡೆದಿದ್ದು, ಎರಡನೇ ಹಂತದ ಕಾಮಗಾರಿಗೆ 195 ಕೋ.ರೂ. ಮೊತ್ತದ ಅಂದಾಜು ಪಟ್ಟಿಸಲ್ಲಿಸಲಾಗಿದ್ದು, ಏಪ್ರಿಲ್ ತಿಂಗಳಲ್ಲಿ ನಡೆಯುವ ಕ್ಯಾಬಿನೆಟ್ ಸಭೆಯಲ್ಲಿ ಇದಕ್ಕೆ ಅನುಮೋದನೆ ದೊರೆಯುವ ಸಾಧ್ಯತೆಯಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ ತಿಳಿಸಿದ್ದಾರೆ.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜೈಲಿನ ಅವರಣಗೋಡೆ ಹಾಗೂ ಬ್ಯಾರಕ್‌ಗಳ ನಿರ್ಮಾಣ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ. 1 ಸಾವಿರ ಮಂದಿ ಕೈದಿಗಳನ್ನು ಇರಿಸಲು ಅವಕಾಶವಿದೆ. ಎರಡನೇ ಹಂತದಲ್ಲಿ 195 ಕೋ.ರೂ. ವೆಚ್ಚದಲ್ಲಿ ಸಿಬಂದಿಯ ವಸತಿಗೃಹ ನಿರ್ಮಾಣ ಬಾಕಿ ಇದೆ ಎಂದರು.

ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಸದ್ಯದಲ್ಲೇ ಜಿಲ್ಲೆಗೆ ಭೇಟಿ ನೀಡಲಿದ್ದು, ಈ ವೇಳೆ ಮಂಗಳೂರಿನ ಕಾರಾಗೃಹ ಮತ್ತು ಬಂಟ್ವಾಳದಲ್ಲಿ ನಿರ್ಮಾಣ ಹಂತದಲ್ಲಿರುವ ಕಾರಾಗೃಹಕ್ಕೂ ಭೇಟಿ ನೀಡಲಿದ್ದಾರೆ. ಜೈಲಿನ ಕಟ್ಟಡ ಕಾಮಗಾರಿ ಸಹಿತ ಮೂಲ ಸೌಕರ್ಯಗಳನ್ನು ಈಗಾಗಲೇ ಪೂರ್ಣಗೊಳಿಸಿರುವುದರಿಂದ 3 ತಿಂಗಳಲ್ಲಿ ಸ್ಥಳಾಂತರಗೊಳ್ಳುವ ನಿರೀಕ್ಷೆ ಇದೆ ಎಂದರು.

ಮಂಗಳೂರು ಕಾರಾಗೃಹ ಸೂಕ್ಷ್ಮ ಕಾರಾಗೃಹ. ಆದರೆ ಸರಿಯಾದ ಅಧಿಕಾರಿ ಮತ್ತು ಸಿಬಂದಿಯ ನಿಯೋಜನೆ ಆಗದೆ, ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿವೆ. 210 ಮಂದಿಯ

ಸಾಮರ್ಥ್ಯದ ಜೈಲಿನಲ್ಲಿ 331 ಮಂದಿ ಕೈದಿಗಳನ್ನು ಇರಿಸಲಾಗಿದೆ. ಕೈದಿಗಳು ಒಟ್ಟಾಗಿ ‘ಇರುವುದರಿಂದ ಅಕ್ರಮ ಚಟುವಟಿಕೆಗಳಿಗೆ ಅವಕಾಶ ನೀಡಿದಂತಾಗಿದೆ ಎಂದರು.

ಜೈಲಿನಲ್ಲಿ ಅಳವಡಿಸಿರುವ ಜಾಮರ್‌ನಿಂದ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಗೆ ಸಂಬಂಧಿಸದಿಂತೆ ಈಗಾಗಲೇ ಗೃಹ ಸಚಿವರ ಗಮನಕ್ಕೆ ತರಲಾಗಿದೆ. ಶೀಘ್ರ ಇದಕ್ಕೊಂಡು ಪರಿಹಾರ ದೊರೆಯಲಿದೆ. ಜೈಲು ಸ್ಥಳಾಂತರಗೊಂಡರೆ ಸಾಕಷ್ಟುಸಮಸ್ಯೆಗಳು ಪರಿಹಾರವಾಗಲಿದೆ ಎಂದರು.

ಈ ಬಾರಿಯ ವಿಧಾನ ಪರಿಷತ್ ಅಧಿವೇಶನದಲ್ಲಿ ಜಿಲ್ಲೆ ಹಾಗೂ ರಾಜ್ಯಕ್ಕೆ ಸಂಬಂಧಿಸಿದ 65 ಪ್ರಶ್ನೆಗಳನ್ನು ಕೇಳಲಾಗಿದ್ದು, ಬಹುತೇಕ ಪ್ರಶ್ನೆಗಳಿಗೆ ಉತ್ತರ ಲಭ್ಯವಾಗಿದೆ. ರಾಷ್ಟ್ರೀಯ ಹೆದ್ದಾರಿ, ಕ್ರಿಕೆಟ್ ಮೈದಾನ, ಮಂಗಳೂರು ಮಹಾನಗರ ಪಾಲಿಕೆ ಸೇರಿದಂತೆ ವಿವಿಧ ಪ್ರಶ್ನೆಗಳನ್ನು ಕೇಳಲಾಗಿದೆ. ಕೆಲವು ಪ್ರಶ್ನೆಗಳಿಗೆ ಇನ್ನಷ್ಟೇ ಉತ್ತರ ಸಿಗಬೇಕಾಗಿದೆ ಎಂದರು

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article