
ವಿಜಯ ಫ್ರೆಂಡ್ಸ್ ಸೂಟರ್ ಪೇಟೆ ವಾರ್ಷಿಕೋತ್ಸವ: ‘ನೃತ್ಯ-ಗಾನ-ಸಿಂಚನ’ ಸಾಂಸ್ಕೃತಿಕ ಕಾರ್ಯಕ್ರಮ
ಮಂಗಳೂರು: ಊರಿನಲ್ಲಿ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ವಿಜಯ ಫ್ರೆಂಡ್ಸ್ ಸೂಟರ್ಪೇಟೆ ಇದರ 12ನೇ ವರ್ಷದ ವಾರ್ಷಿಕೋತ್ಸವ ಸೂಟರ್ ಪೇಟೆ ಶ್ರೀ ಕೋರ್ದಬ್ಬು ದೈವಸ್ಥಾನದ ಬಬ್ಬುಸ್ವಾಮಿ ರಂಗ ಮಂದಿರದಲ್ಲಿ ‘ನೃತ್ಯ-ಗಾನ-ಸಿಂಚನ’ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿದ ಸೂಟರ್ಪೇಟೆ ಶ್ರೀ ಕೋರ್ದಬ್ಬು ದೈವಸ್ಥಾನದ ಗುರಿಕಾರ ಎಸ್. ರಾಘವೇಂದ್ರ ಮಾತನಾಡಿ, ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳು ಸಂಘಟನೆಯ ಬೆಳವಣಿಗೆಯನ್ನು ಸೂಚಿಸುತ್ತದೆ. ಇದರಿಂದ ಪ್ರಜ್ಞಾವಂತ ಯುವಕರು ಸಮಾಜದ ಶಕ್ತಿಯಾಗುತ್ತಾರೆ. ಈ ಮೂಲಕ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು.
ಸಮಾರಂಭದಲ್ಲಿ ಅಖಿಲ ಭಾರತ ಮುಂಡಾಲ ಯುವ ವೇದಿಕೆಯ ಅಧ್ಯಕ್ಷ ಪ್ರದೀಪ್ ಕಾಪಿಕಾಡ್, ಉದ್ಯಮಿ ನೆಲ್ಸನ್ ಕ್ಯಾಸ್ಟೆಲಿನೋ, ಮಂಗಳೂರು ಕ್ಲಬ್ ಇದರ ನಿವೃತ್ತ ವ್ಯವಸ್ಥಾಪಕ ಕೆ. ಪಾಂಡುರಂಗ, ಕ್ರೀಡಾ ಅಂಕಣಕಾರ ಎಸ್. ಜಗದೀಶ್ಚಂದ್ರ ಅಂಚನ್, ಕಂಕನಾಡಿ ಶ್ರೀ ಕೋರ್ದಬ್ಬು ದೈವಸ್ಥಾನದ ಗುರಿಕಾರರಾದ ಎಸ್. ದಯಾನಂದ, ಕಾರ್ಪೋರೇಟರ್ ಭರತ್ ಕುಮಾರ್, ಮಾಜಿ ಕಾರ್ಪೋರೇಟರ್ ಅಪ್ಪಿ ಎಸ್., ಎಂ.ಆರ್.ಪಿ.ಎಲ್ ರಿಟೇಲ್ ಇಂಜಿನಿಯರಿಂಗ್ ಸೆಕ್ಷನ್ ಇಂಜಿನಿಯರ್ ಪೃಥ್ವೀಶ್ ಪರಮೇಶ್ವರ್, ಗೌರವ ಸಲಹೆಗಾರರಾದ ವೇದಾ ವಿಶ್ವನಾಥ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
ವೇದಿಕೆಯಲ್ಲಿ ವಿಜಯ ಫ್ರೆಂಡ್ಸ್ ಅಧ್ಯಕ್ಷೆ ಭವಾನಿ ಸುದೇಶ್, ಗೌರವಾಧ್ಯಕ್ಷರುಗಳಾದ ಮೋಹನ್, ಬಾಲಕೃಷ್ಣ ಜೋಗಿ, ಉಪಾಧ್ಯಕ್ಷ ಎಸ್. ವಿಖ್ಯಾತ್, ಕಾರ್ಯದರ್ಶಿ ರವಿರಾಜ್ ಎಸ್., ಜೊತೆ ಕಾರ್ಯದರ್ಶಿ ಹೇಮಂತ್, ಕೋಶಾಧಿಕಾರಿ ಯತೀನ್, ಜೊತೆ ಕೋಶಾಧಿಕಾರಿ ಶುಭೋದಯ, ಸಾಂಸ್ಕೃತಿಕ ಕಾರ್ಯದರ್ಶಿ ಭಾಗ್ಯಲಕ್ಷ್ಮೀ, ತಂಡದ ನಾಯಕ ರೋಶನ್, ಕ್ರೀಡಾ ಕಾರ್ಯದರ್ಶಿ ವಿಜಯಾನಂದ, ಜೊತೆ ಕ್ರೀಡಾದರ್ಶಿ ಚಿರಾಗ್ ಎಲ್.ಆರ್., ವ್ಯವಸ್ಥಾಪಕರಾದ ಪವನ್ ಕುಮಾರ್ ಹಾಗೂ ಕೃತಿಕಾ ಎಸ್.ಬಿ. ಉಪಸ್ಥಿತರಿದ್ದರು.
ಸಮಾರಂಭದಲ್ಲಿ 2024-25ನೇ ಸಾಲಿನ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿ.ಯು.ಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ಆಯ್ದ ವಿದ್ಯಾರ್ಥಿಗಳಿಗೆ ದಿ. ಸಂಕಪ್ಪ ಅವರ ಸ್ಮರಣಾರ್ಥ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಅಧ್ಯಕ್ಷೆ ಭವಾನಿ ಸುದೇಶ್ ಸ್ವಾಗತಿಸಿ, ರವಿರಾಜ್ ಎಸ್ ವಂದಿಸಿದರು. ಕಾರ್ಯಕ್ರಮವನ್ನು ಯತೀನ್ ಕುಮಾರ್ ಅಂಚನ್ ಹಾಗೂ ಶುಭಂ ಕುಲಾಲ್ ನಿರೂಪಿಸಿದರು. ನಂತರ ನಡೆದ ‘ನೃತ್ಯ-ಗಾನ-ಸಿಂಚನ’ ಸಾಂಸ್ಕೃತಿಕ ಕಾರ್ಯಕ್ರಮ ಜನ ಮೆಚ್ಚುಗೆ ಪಡೆಯಿತು.