
ದರೋಡೆ ವೇಳೆ ಮೊಳಗಿದ ಸೈರನ್: ಖದೀಮರು ಪೊಲೀಸ್ ಬಲೆಗೆ
Monday, March 31, 2025
ಮಂಗಳೂರು: ದೇರಳಕಟ್ಟೆಯ ಮುತ್ತೂಟ್ ಫೈನಾನ್ಸ್ನಲ್ಲಿ ದರೋಡೆ ಮಾಡುತ್ತಿದ್ದ ವೇಳೆ ಸೈರನ್ ಮೊಳಗಿ ಖದೀಮರು ಪೊಲೀಸರ ಕೈಗೆ ಸಿಕ್ಕಿಬಿದ್ದ ಘಟನೆ ಶನಿವಾರ ತಡರಾತ್ರಿ ನಡೆದಿದೆ.
ಮಂಗಳೂರು ಹೊರವಲಯದ ದೇರಳಕಟ್ಟೆ ಎಂಬಲ್ಲಿ ನಡೆದ ಘಟನೆ ನಡೆದಿದ್ದು, ನಡುರಾತ್ರಿ ಬೀಗ ಮುರಿಯುತ್ತಿದ್ದಾಗಲೇ ಸೈರನ್ ಮೊಳಗಿದೆ. ಕೇರಳ ಮೂಲದ ಮೂವರು ಫೈನಾನ್ಸ್ ಗೆ ಕನ್ನ ಕೊರೆಯುತ್ತಿದ್ದರು. ಕೂಡಲೇ ಸ್ಥಳಕ್ಕಾಗಮಿಸಿದ ಕೊಣಾಜೆ ಪೊಲೀಸರು ಕೇರಳ ಕಾಂಞಂಗಾಡ್ ನ ಮುರಳಿ ಮತ್ತು ಕಾಸರಗೋಡುವಿನ ಹರ್ಷದ್ ನನ್ನು ಸೆರೆ ಹಿಡಿದಿದ್ದಾರೆ. ಓರ್ವ ಪರಾರಿಯಾಗಿದ್ದಾನೆ.
ಕಳ್ಳರು ಒಳಗೆ ನುಗ್ಗಲು ಪ್ರಯತ್ನ ಪಡುತ್ತಿದ್ದಂತೆ ಫೈನಾನ್ಸ್ ನ ವಿಭಾಗ ಕಚೇರಿಯ ಕಂಟ್ರೊಲ್ ರೂಮ್ ನಲ್ಲಿ ಸೈರನ್ ಮೊಳಗಿದೆ. ದರೋಡೆ ಬಗ್ಗೆ ಕೊಣಾಜೆ ಪೊಲೀಸರಿಗೆ ಮಾಹಿತಿ ಹೋಗಿದೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಕೊಣಾಜೆ ಪೊಲೀಸರು ರೆಡ್ ಹ್ಯಾಂಡ್ ಆಗಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.