ಉಳ್ಳಾಲ ಕೇಂದ್ರ ಮಸೀದಿಯಲ್ಲಿ ಸಂಭ್ರಮದ ಈದ್ ಹಬ್ಬ ಆಚರಣೆ

ಉಳ್ಳಾಲ ಕೇಂದ್ರ ಮಸೀದಿಯಲ್ಲಿ ಸಂಭ್ರಮದ ಈದ್ ಹಬ್ಬ ಆಚರಣೆ

ಸೌಹಾರ್ದತೆ ಬೆಳೆಸುವುದು ಈದ್ ಹಬ್ಬದ ಗುರಿ: ಸ್ಪೀಕರ್ ಯು.ಟಿ. ಖಾದರ್ 


ಉಳ್ಳಾಲ: ಒಂದು ತಿಂಗಳ ಕಾಲ ಉಪವಾಸ ಹಿಡಿದು ಶಾಂತಿ ಸೌಹಾರ್ದತೆ ಯಿಂದ ಈದುಲ್ ಫಿತ್ ರ್ ಹಬ್ಬವನ್ನು ಮುಸ್ಲಿಮರು ಆಚರಿಸುತ್ತಾರೆ.ಸೌಹಾರ್ದತೆ ಬೆಳೆಸುವುದೇ ಈ ಹಬ್ಬದ ಮುಖ್ಯ ಗುರಿ ಎಂದು ಸ್ಪೀಕರ್ ಯು.ಟಿ. ಖಾದರ್ ಹೇಳಿದರು.

ಈದ್ ಮುಬಾರಕ್ ಹಬ್ಬದ ಪ್ರಯುಕ್ತ ಉಳ್ಳಾಲ ದರ್ಗಾಕ್ಕೆ ಭೇಟಿ ನೀಡಿ ಝಿಯಾರತ್ ಮಾಡಿದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದರು.

ದರ್ಗಾ ಅಧ್ಯಕ್ಷ ಹನೀಫ್ ಹಾಜಿ ಮಾತನಾಡಿ, ಇಸ್ಲಾಮಿನ ಕಡ್ಡಾಯ ಕರ್ಮವಾಗಿರುವ ಒಂದು ತಿಂಗಳ ಉಪವಾಸ ಮುಗಿಸಿ ಈದುಲ್ ಫಿತ್ ರ್ ಹಬ್ಬ ಆಚರಿಸಲಾಗುತ್ತದೆ. ಎಲ್ಲಾ ಧರ್ಮಗಳಲ್ಲಿ ಹಬ್ಬಗಳಿವೆ. ಶಾಂತಿ ಸೌಹಾರ್ದತೆ ಬೆಳೆಸುವುದೇ ಇವುಗಳ ಮೂಲ ಗುರಿ ಎಂದು ಹೇಳಿದರು.

ಉಳ್ಳಾಲ ಕೇಂದ್ರ ಜುಮ್ಮಾ ಮಸೀದಿ ಖತೀಬ್ ಹಾಫಿಲ್ ಸುಹೈಲ್ ನೂರಾನಿ ಪೆರ್ನಾಲ್ ನಮಾಝ್ ಹಾಗೂ ಖುತುಬಾ ಪಾರಾಯಣದ ನೇತೃತ್ವ ವಹಿಸಿದ್ದರು.

ದರ್ಗಾ ಅಧ್ಯಕ್ಷ ಹನೀಫ್ ಹಾಜಿ, ಉಪಾಧ್ಯಕ್ಷ ಅಶ್ರಫ್ ರೈಟ್ ವೇ, ಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ, ಕಾರ್ಯದರ್ಶಿ ಮುಸ್ತಫಾ ಮದನಿಗರ, ಕೋಶಾಧಿಕಾರಿ ನಾಝೀಮ್ ಮುಕಚೇರಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article