ಎಕ್ಸಲೆಂಟ್ ಆಶ್ರಯದಲ್ಲಿ ಬೇಸಿಗೆ ಶಿಬಿರ ‘ಜ್ಞಾನ ರಶ್ಮಿ’ ಉದ್ಘಾಟನೆ

ಎಕ್ಸಲೆಂಟ್ ಆಶ್ರಯದಲ್ಲಿ ಬೇಸಿಗೆ ಶಿಬಿರ ‘ಜ್ಞಾನ ರಶ್ಮಿ’ ಉದ್ಘಾಟನೆ


ಮೂಡುಬಿದಿರೆ: ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ಸ್ಕೌಟ್ ಗೈಡ್ಸ್ ವತಿಯಿಂದ ನಾಲ್ಕು ದಿನಗಳ ಕಾಲ ನಡೆಯು ಬೇಸಿಗೆ ಶಿಬಿರ ‘ಜ್ಞಾನ ರಶ್ಮಿ’ಯನ್ನು ಖ್ಯಾತ ರಂಗಕಮಿ೯, ರಾಷ್ಟ್ರಪ್ರಶಸ್ತಿ ವಿಜೇತ ಡಾ. ಜೀವನ್ ರಾಮ್ ಸುಳ್ಯ ಅವರು ಶನಿವಾರ ಉದ್ಘಾಟಿಸಿದರು.


ನಂತರ ಮಾತನಾಡಿದ ಅವರು ಸಮಾಜದಲ್ಲಿ ಸಾಧಕ ನೆನೆಸಿಕೊಳ್ಳಲು ಹಲವು ದಿನಗಳ ನಿದ್ದೆ, ಹಸಿವು ಸಮಯ ಇತ್ಯಾದಿಗಳ ಪರಿವೇ ಇಲ್ಲದೆ ಪರಿಶ್ರಮ ಪಟ್ಟರೆ ಯಶಸ್ಸು ಕಟ್ಟಿಟ್ಟ ಬುತ್ತಿ. ವಿದ್ಯಾಥಿ೯ಗಳಲ್ಲಿ ಸುಪ್ತ ಪ್ರತಿಭೆಗಳಿದ್ದು ಹೊರತೆಗೆಯಲು ಈ ತರಹದ ಶಿಬಿರಗಳು ಅನುಕೂಲಕರವಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.

ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಇಂದಿನ ಸ್ರ್ಧಾತ್ಮಕ ಯುಗದಲ್ಲಿ ಬದುಕಬೇಕು ಅಂದರೆ ಜ್ಞಾನ ದೊಂದಿಗೆ ಈಜ ಬೇಕು. ತಾಂತ್ರಿಕ ಯುಗದಲ್ಲಿ ಜ್ಞಾನಕ್ಕೆ ಬೆಲೆ ಬರುವುದು ಸಕಲ ವಿದ್ಯೆಯಿಂದ. ಮಕ್ಕಳು ಸಾಧ್ಯವಾದಷ್ಟು ಸಿಗುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಪ್ರತಿಭೆಯನ್ನು ಹೊರ ಚೆಲ್ಲಬೇಕು. ಆಗ ಸಮಾಜದ ಆಸ್ತಿ ಯಾಗುತ್ತಾರೆ ಮತ್ತು ಅತ್ಯುತ್ತಮ ಗೌರವ ಸಿಗುತ್ತದೆ ಎಂದರು.

ಎಕ್ಸಲೆಂಟ್ ಸಿಬಿಎಸ್‌ಸಿ ಸಂಸ್ಥೆಯ ಪ್ರಾಂಶುಪಾಲ ಸುರೇಶ, ಸ್ಕೌಟ್ ಮತ್ತು ಗೈಡ್ಸ್ ಶಿಕ್ಷಕರು ಉಪಸ್ಥಿತರಿದ್ದರು. ಕಲಾ ಶಿಕ್ಷಕ ಭಾಸ್ಕರ್ ನೆಲ್ಯಾಡಿಯವರು ಅತಿಥಿಯನ್ನು ಪರಿಚಯಿಸಿ, ಸ್ವಾಗತಿಸಿದರು. ಲಕ್ಷ್ಮೀ ಕಾಯ೯ಕ್ರಮ ನಿರೂಪಿಸಿದರು. ಮಾನಿತಾ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article