
ಮಿತ್ತಮಜಲುಕ್ಷೇತ್ರದಲ್ಲಿ ‘ಕೋಳಿ ಕುಂಟ’
Monday, April 7, 2025
ಬಂಟ್ವಾಳ: ಬಿಸು ಜಾತ್ರೆಯ ಪ್ರಯುಕ್ತ ಸಜೀಪಮಾಗಣೆಯ ಮಿತ್ತಮಜಲುಕ್ಷೇತ್ರದಲ್ಲಿ ಪೂರ್ವ ಶಿಷ್ಟ ಸಾಂಪ್ರದಾಯದಂತೆ ‘ಕೋಳಿ ಕುಂಟ’ ಸೋಮವಾರ ಸಜೀಪ ಮಾಗಣೆ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್ ಅವರ ದೇವತಾ ಪ್ರಾರ್ಥನೆಯೊಂದಿಗೆ ನೆರವೇರಿತು.
ಪಾಲೆಮಂಟಮೆ ಸಂಸಾರ, ಕಾಂತಾಡಿಗುತ್ತು ಗಡಿ ಪ್ರಧಾನರಾದ ಗಣೇಶ ನಾಯಕ್ ಯಾನೆ ಉಗ್ಗ ಶೆಟ್ಟಿ, ಬೀಜಂದಾರುಗುತ್ತು ಶಿವರಾಮ ಭಂಡಾರಿ, ಮಾಡದಾರುಗುತ್ತು ಗಡಿ ಪ್ರಧಾನರಾದ ಶಶಿಧರ ರೈ, ನಗ್ರಿಗುತ್ತು ಜಯರಾಮ ಶೆಟ್ಟಿ, ನಗ್ರಿಗುತ್ತು ವಿವೇಕ ಶೆಟ್ಟಿ, ಜೀವನ ಆಳ್ವ, ಶ್ರೀಕಾಂತ ಶೆಟ್ಟಿ ಸಂಕೇಶ, ಶ್ರೀನಾಥ ಶೆಟ್ಟಿ, ದೇವಿ ಪ್ರಸಾದ ಪೂಂಜಾ, ಹರೀಶ ರೈ, ಶಂಕರ ಪೂಜಾರಿ ಯಾನೆ ಕೊಚು ಪೂಜಾರಿ, ದಯಾನಂದ ಪೂಜಾರಿ ಯಾನೆ ಕುಂಜ್ಞ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.