ಮೇ.13 ರಂದು ಬೃಹತ್ ರೈತ ಹೋರಾಟಕ್ಕೆ ಕರೆ

ಮೇ.13 ರಂದು ಬೃಹತ್ ರೈತ ಹೋರಾಟಕ್ಕೆ ಕರೆ

ಕುಂದಾಪುರ: ಹಸಿರು ಸೇನೆ ಕೋಟ ಹಾಗೂ ಹದಿನಾಲ್ಕು ಗ್ರಾಮ  ರೈತ ಸಂಘಟನೆಗಳು ಜಂಟಿಯಾಗಿ ಮೇ.13 ರಂದು ಬೃಹತ್ ರೈತ ಚಳುವಳಿಗೆ  ಕರೆ ಕೊಟ್ಟಿವೆ. 

ಸೂಲಡ್ಪು ಮಡಿವಾಳಸಾಲು ಹೊಳೆ ಹೂಳು ಸಮಸ್ಯೆಯಿಂದಾಗಿ ಕಳೆದ ಹಲವಾರು ವರ್ಷಗಳಿಂದ ತೆಕ್ಕಟ್ಟೆ, ಉಳ್ತೂರು, ಬೇಳೂರು, ಗಿಳಿಯಾರು, ಕಾರ್ತಟ್ಟು ಚಿತ್ರಪಾಡಿ, ಬನ್ನಾಡಿ, ಉಪ್ಲಾಡಿ,  ಸಾಲಿಗ್ರಾಮ ವ್ಯಾಪ್ತಿಯ ರೈತರು  ಕೃತಕ ನೆರೆ ಹಾವಳಿಗೆ  ಈಡಾಗುತ್ತಿದ್ದು, ಈ ಸಮಸ್ಯೆಯ ಪರಿಹಾರಕ್ಕಾಗಿ ಹಲವಾರು ಬಾರಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಮೇಲಿಂದ ಮೇಲೆ ಮನವಿ ನೀಡಿದ್ದರು. ಅವರೆಲ್ಲ ಯಾವುದೇ ಕ್ರಮ ಕೈಗೊಳ್ಳದೆ ಇರುವ ಹಿನ್ನೆಲೆಯಲ್ಲಿ  ಈ ಭಾಗದ ರೈತ ಪ್ರಮುಖರೆಲ್ಲರೂ   ಕೋಟ ಮಾಂಗಲ್ಯ ಮಂದಿರದಲ್ಲಿ ಸಭೆ ಸೇರಿ ಹೋರಾಟದ ನಿರ್ಣಯವನ್ನು ಕೈಗೊಂಡಿದ್ದಾರೆ. 

ಮೇ 13 ರಂದು ಕೋಟ ಬನ್ನಾಡಿ ರಾಜ್ಯ ಹೆದ್ದಾರಿಯ ಮಗ್ಗುಲಲ್ಲಿ  2,000ಕ್ಕೂ ಅಧಿಕ ರೈತರಿಂದ ರಾಜ್ಯಮಟ್ಟದ ರೈತ ನಾಯಕರ ನೇತೃತ್ವದಲ್ಲಿ  ಪ್ರತಿಭಟನಾ ಸಮಾವೇಶಕ್ಕೆ  ಕರೆ ನೀಡಲಾಗಿದೆ.  

ಸಭೆಯಲ್ಲಿ ಹಿರಿಯರಾದ ಭರತ್ ಕುಮಾರ್ ಶೆಟ್ಟಿ, ಶಾಮ್ ಸುಂದರ್ ನಾಯಿರಿ, ಪ್ರಶಾಂತ್ ಶೆಟ್ಟಿ ಉಳ್ತೂರು, ಅಜಿತ್ ದೇವಾಡಿಗ, ಕೋಟ ಚಂದ್ರ ಪೂಜಾರಿ ಕದ್ರಿ ಕಟ್ಟು, ರವೀಂದ್ರ ಐತಾಳ್, ವಸಂತ ಗಿಳಿಯಾರು, ರಾಜಾರಾಮ್ ಶೆಟ್ಟಿ ಗಿಳಿಯಾರು, ಪ್ರಸಾದ್ ಬಿಲ್ಲವ, ಬೇಳೂರು ದಿನೇಶ್ ಶೆಟ್ಟಿ, ಗಿರೀಶ್ ಗಾಣಿಗ ಬೆಟ್ಲಕ್ಕಿ, ಸಂತೋಷ ಪೂಜಾರಿ ಕಂಬಳ ಗೆದ್ದೆ, ಲಲಿತಾ ಪೂಜಾರ್ತಿ, ಶೇಖರ್ ಗಿಳಿಯಾರು, ಜಡ್ಡಾಡಿ ವಿಜಯ್ ಕುಮಾರ್ ಶೆಟ್ಟಿ, ಅರುಣ್ ಶೆಟ್ಟಿ ಪಡುಮನೆ, ಪ್ರಶಾಂತ್ ಶೆಟ್ಟಿ ಉಳ್ತೂರು, ರಾಜು ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article