ಪ್ರತಿಭಟನೆ ಕಾಂಗ್ರೆಸ್ ಪ್ರಾಯೋಜಿತ: ಬಿಜೆಪಿ

ಪ್ರತಿಭಟನೆ ಕಾಂಗ್ರೆಸ್ ಪ್ರಾಯೋಜಿತ: ಬಿಜೆಪಿ

ಮಂಗಳೂರು: ವಕ್ಪ್ ತಿದ್ದುಪಡಿ ಕಾಯ್ದೆಯು ಸಂಸತ್ತಿನಲ್ಲಿ ಹಾಗೂ ಜಂಟಿಸದನ ಸಮಿತಿಯಲ್ಲಿ ಚರ್ಚೆಯಾಗಿ ಬಹುಮತದಿಂದ ಸಾಂವಿಧಾನಿಕ ವಿಧಾನದಲ್ಲೇ ಅಂಗೀಕಾರಗೊಂಡಿದೆ. ಹಾಗೂ ರಾಷ್ಟ್ರಪತಿಯವರಿಂದಲೂ ಅಂಕಿತಗೊಂಡು ಪೂರ್ಣ ಪ್ರಮಾಣದ ಕಾಯ್ದೆ ಆಗಿ ರೂಪುಗೊಂಡಿದೆ. ಆದರೂ ಈ ಕಾಯ್ದೆಯನ್ನು ನ್ಯಾಯಾಲಯಕ್ಕೆ ಹೋಗಿ ಚಾಲೆಂಜ್ ಮಾಡುವ ಅವಕಾಶವನ್ನು  ಪಡೆದು ಸಾಂವಿಧಾನಿಕವಾಗಿ ಈ ವಿಚಾರ ನ್ಯಾಯಾಲಯದಲ್ಲಿ ಪ್ರಕ್ರಿಯೆಯಲ್ಲಿ ಇದೆ. ಆದ್ದರಿಂದ ಇನ್ನು ನ್ಯಾಯಾಲಯದ ನಿರ್ಣಯಕ್ಕಾಗಿ ಕಾಯಬೇಕು. ಪ್ರತಿಭಟನೆ ಮಾಡುವ ಅಗತ್ಯ ಇರುವುದಿಲ್ಲ.

ಆದರೆ ಯಾವತ್ತೂ ಸಂವಿಧಾನದ ಬಗ್ಗೆ ಮಾತನಾಡುವ ಈ ಕಾಂಗ್ರೇಸ್, ತನ್ನ ಹಿಂಬಾಗಿಲಿನ ಕುಮ್ಮಕ್ಕಿನಿಂದ ಅಲ್ಲಲ್ಲಿ ಪ್ರತಿಭಟನೆ ನಡೆಸಿ ನ್ಯಾಯಾಲಯದ ಪ್ರಕ್ರಿಯೆಯ ಮೇಲೆ ಪ್ರಭಾವಿತ ಮಾಡಬಹುದು ಅನ್ನುವ ಹುಂಬ ಹುನ್ನಾರ ನಡೆಸುತ್ತಿದೆ. ಅಷ್ಟೇ ಅಲ್ಲದೇ ಇದಕ್ಕೆ ವಿರೋಧಮಾಡುವವರು ಈ ಕಾಯ್ದೆಯಲ್ಲಿ ಯಾವ ವಿಚಾರ ಅಸಂವಿಧಾನಿಕವಾಗಿದೆ ಎಂದು ತೋರಿಸಲು ಇವರಿಗೆ ಸಾಧ್ಯವಾಗುತ್ತಿಲ್ಲಾ. ಆದರೆ ತಮ್ಮ ಮೂಗಿನ ನೇರಕ್ಕೆ ಲೂಟಿ ಹೊಡೆಯುವ ಅವಕಾಶ ಇರುವಂತಹ  ಹಳೇ ಕಾಯ್ದೆಯೇ ಇರಬೇಕು ಅನ್ನುವ ತಥಾಕಥಿತ ಮುಖಂಡರ ಅಂಬೋಣವನ್ನು ನೋಡಿದಾಗ ಬಹಳ ವಿಷಾದ ಎನ್ನಿಸುತ್ತದೆ.

ಈ ಕಾಯ್ದೆಯು ಮುಸ್ಲಿಂ ಜನಾಂಗದ ಅದರಲ್ಲೂ ಹಿಂದುಳಿದಿರುವ ಹಾಗೂ ಬಡ ಮುಸ್ಲಿಂ ಬಂಧುಗಳ ಅಭ್ಯುದಯಕ್ಕಾಗಿ ಒಂದು ಹೊಸ "ಉಮ್ಮೀದ್" ಆಗಿದೆ ಅಂದರೆ ವಂಚಿತ ಮುಸಲ್ಮಾನರ ಬಾಳಲ್ಲಿ ಆಶಾಕಿರಣವನ್ನು ಕೊಟ್ಟಿದೆ. ಆದರೂ ತಮ್ಮ ಮತ ಬ್ಯಾಂಕ್ ಕಳೆದುಕೊಳ್ಳುವ ಭೀತಿಯಲ್ಲಿರುವ ಕಾಂಗ್ರೇಸ್ ಮುಸಲ್ಮಾನರ ಮಧ್ಯದಲ್ಲಿ ಸುಳ್ಳು ವದಂತಿಗಳನ್ನು ಹರಡುವ ಮೂಲಕ ಅವರನ್ನು ಎತ್ತಿಕಟ್ಟಿ ಪ್ರಕ್ಷುಬ್ದ ವಾತಾವರಣವನ್ನು ಸೃಷ್ಟಿಸುವ ಹುನ್ನಾರವನ್ನು ಕೈಗೆತ್ತಿಕೊಂಡಿರುವುದು ಕೈ ಮುಖಂಡರ ಹೇಳಿಕೆಯಿಂದ ವೇದ್ಯವಾಗುತ್ತದೆ. ಈ ಹಿಂದೆ ಇದೇ ಮಾದರಿಯ ಸುಳ್ಳು ವದಂತಿಗಳ ಆಧಾರದಲ್ಲಿ ಪ್ರತಿಭಟನೆಗಳು ನಡೆದಾಗ ಪೋಲಿಸರ ಮೇಲೇಯೂ ಹಲ್ಲೆ ನಡೆದು ನಮ್ಮ ಜಿಲ್ಲೆಯ ಶಾಂತಿಗೆ ಬೆಂಕಿ ಹಾಕಿದ್ದನ್ನಾದರೂ ನೆನೆಸಿ ಜಿಲ್ಲಾಡಳಿತ ಈ ವಿಚಾರದಲ್ಲಿ ಯಾವ ಕಾಂಗ್ರೇಸ್ಸಿಗರ ಒತ್ತಡಕ್ಕೂ ಮಣೆ ಹಾಕದೆ ದಿಟ್ಟತನವನ್ನು ಪ್ರದರ್ಶಿಸಬಹುದಿತ್ತು. ಈ ಅನಾವಶ್ಯಕ ಪ್ರತಿಭಟನೆಗೆ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳ ಸಂಚಾರವನ್ನು ಬಾದ್ಯತೆಗೆ ಒಳಪಡಿಸಿ ಜನಜೀವನವನ್ನು ದುಸ್ತರಗೊಳಿಸುವ ಮುಖೇನ ಕಾಂಗ್ರೇಸ್ ಸರಕಾರವೇ ಇದಕ್ಕೆ ಯಾವ ರೀತಿಯಲ್ಲಿ ಕುಮ್ಮಕ್ಕು ನೀಡಿದೆ ಅನ್ನುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಆದ್ದರಿಂದ ನಮ್ಮ ಜಿಲ್ಲಾಡಳಿತವು ಕಾಂಗ್ರೇಸ್ಸಿನ ಒತ್ತಡಗಳಿಂದ ಮೇಲೆದ್ದು ದಕ್ಷಿಣ ಕನ್ನಡ ಜಿಲ್ಲೆಯ ಶಾಂತಿಯನ್ನು ಕಾಪಾಡುವ ಹೊಣೆಯನ್ನು ಅರಿತು ಈ ಅನಾವಶ್ಯಕ ಕಾರ್ಯಕ್ರಮಕ್ಕಾಗಿ ಇಡೀಯ ಜಿಲ್ಲೆಯ ಜನರ ಜೀವನವನ್ನು ಅಸ್ತವ್ಯಸ್ತಗೊಳಿಸುವ ಬದಲು ಸೂಕ್ತ ರೀತಿಯಲ್ಲಿ ನಿರ್ಭಂಧಗಳನ್ನು ಹೊರಿಸಿ ಇವನ್ನು ನಿಗ್ರಹಿಸಬೇಕೆಂದು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ವಕ್ತಾರ ಅರುಣ್ ಜಿ. ಶೇಟ್ ಪ್ರಕಟನೆ ಮೂಲಕ ಆಗ್ರಹಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article