ಜಾತಿ ಗಣತಿ ವರದಿ ತಿರಸ್ಕರಿಸಿ ಹೊಸ ಗಣತಿ ಮಾಡಿ

ಜಾತಿ ಗಣತಿ ವರದಿ ತಿರಸ್ಕರಿಸಿ ಹೊಸ ಗಣತಿ ಮಾಡಿ


ಮಂಗಳೂರು: ಜಾತಿ ಗಣತಿ ವರದಿಯನ್ನು ರಾಜ್ಯ ಸರಕಾರ  ತಿರಸ್ಕರಿಸಬೇಕು, ಬೇಕಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇನ್ನೂ ಒಂದುವರೆ ವರ್ಷದಲ್ಲಿ ಹೊಸತಾಗಿ ಜಾತಿಗಣತಿ ಮಾಡಿಸಿ ಆ ವರದಿಯನ್ನು ಜಾರಿಗೆ ತರಲಿ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದ್ದಾರೆ.

ನಗರದಲ್ಲಿ ಇಂದು ಸಂಜೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ  ತಮ್ಮ ಕುರ್ಚಿಯನ್ನು ಉಳಿಸಲು, ಜಾತಿ ಗಣತಿ ವರದಿ ಜಾರಿ ಮೂಲಕ ಗೊಂದಲ ಸೃಷ್ಠಿಸುತ್ತಿದ್ದಾರೆ. ಸಿದ್ದರಾಮಯ್ಯ ದೇವರಾಜು ಅರಸುಗಿಂತ ದೊಡ್ಡವರಲ್ಲ. ಈಗಿನ ಜಾತಿಗಣತಿ ವರದಿ ಮಕ್ಕಿಕಾಮಕ್ಕಿ ಮಕ್ಮಲ್‌ಟೋಪಿ ಎಲ್ಲೋ ಕುಳಿತು ಅವರಿಗೆ ಬೇಕಂತೆ ವರದಿಯನ್ನು ರೂಪಿಸಲಾಗಿದೆ. ಇದು ಜಾರಿಯಾದರೆ ಲಕ್ಷಾಂತರ ಕುಟುಂಬಗಳಿಗೆ ಅನ್ಯಾಯವಾಗಲಿದೆ. ಇಂತಹ ಮಹಾ ಅಪರಾಧ ಮಾಡುವುದು ಬೇಡ ಇದನ್ನು ಜಾರಿಗೊಳಿಸುವುದು ಅವರಿಗೆ ಗೌರವ ತರುವುದಿಲ್ಲ ಎಂದರು.

ಈ ವರದಿಯನ್ನು ಜಾರಿಗೊಳಿಸುವ ಅವಶ್ಯಕತೆ ಇರಲಿಲ್ಲ ಯಾವ ಉದ್ದೇಶಕ್ಕಾಗಿ ಇದನ್ನು ಜಾರಿಗೊಳಿಸಲಾಗುತ್ತಿದೆಯೋ ಗೊತಿಲ್ಲ ಎಂದು ರಾಜ್ಯ ಸಚಿವ ಸಂಪುಟದ  ಬಹುತೇಕ ಸಚಿವರು ಹೇಳುತ್ತಿದ್ದಾರೆ ಎಂದರು.

ಭ್ರಷ್ಟ ವ್ಯವಸ್ಥೆಯನ್ನು ರೂಪಿಸಿ, ನಾನು ಬಾರೀ ಒಳ್ಳೆಯವನು ಎಂದು ನಿಮಗೆ ನೀವೇ ಹೇಳಿಕೊಳ್ಳುತ್ತಿದ್ದಿರಿ, ಇನ್ನೊಂದು ಕಡೆ ಅದಕ್ಕೆ ಅಪಚಾರವಾಗುವಂತಹ ತೀರ್ಮಾನ ಕೈಗೊಳ್ಳುತ್ತಿದ್ದಿರಿ, ಜನರನ್ನು ತುಂಬಾ ದಿನ ಮೋಸ ಮಾಡಲು ಆಗುವುದಿಲ್ಲ. ಇಂತಹ ತಪ್ಪು ಮಾಡಿ ನಾಲ್ಕು ಜನರ ಮುಂದೆ ಖಳನಾಯಕರಾಗಬೇಡಿ ಎಂದರು.

ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರಿಗೆ ಬಂದಿರುವ ಬೆದರಿಕೆ ಕುರಿತಂತೆ ಪ್ರತಿಕ್ರಿಯಿಸಿದ ಅವರು ‘ಇದಕ್ಕಿಂತ ಪಾಪದ ಕೆಲಸ ಇನ್ನೊಂದಿಲ್ಲ. ಇನ್ನೊಬ್ಬರ ಜೀವ ತೆಗೆಯುವ ಹಕ್ಕು ಯಾರಿಗೂ ಇಲ್ಲ. ಈ ರೀತಿ ಮಾಡಿದವರ ವಿರುದ್ಧ ಸರಕಾರ ಕ್ರಮ ಕೈಗೊಳ್ಳಬೇಕು ಎಂದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article