
ಈ ಸಲ ನೀರಿಗಿಲ್ಲ ಬರ
Friday, April 18, 2025
ಮಂಗಳೂರು: ಕರಾವಳಿ ಜಿಲ್ಲೆ ದಕ್ಷಿಣ ಕನ್ನಡದಲ್ಲಿ ಈ ಬಾರಿ ವಿಪರೀತ ಸೆಕೆ ಇದೆ. ಸಾಮಾನ್ಯವಾಗಿ ತುಸು ಹೆಚ್ಚಿಗೆ ಇರಲಿರುವ ತಾಪಮಾನ ಈ ಬಾರಿ ಹಿಂದೆಂದಿಗಿಂತಲೂ ಜಾಸ್ತಿಯಾಗಿದೆ. ಈ ತಾಪಮಾನದ ಬಿಸಿಯ ನಡುವೆ ಈ ಬಾರಿ ಜಿಲ್ಲೆಯ ಜನತೆಗೆ ಕುಡಿಯುವ ನೀರಿಗೆ ಬರವಿಲ್ಲ ಎಂಬುದು ನೆಮ್ಮದಿಗೆ ಕಾರಣವಾಗಿದೆ.
ಕಡಲ ನಗರಿ ದಕ್ಷಿಣ ಕನ್ನಡದಲ್ಲಿ ಬೇಸಿಗೆ ಬಂತೆಂದರೆ ನೀರಿನ ಲಭ್ಯತೆ ಕಡಿಮೆಯಾಗುತ್ತದೆ. ಜಿಲ್ಲೆಯ ಹಲವೆಡೆ ಕುಡಿಯುವ ನೀರಿನ ಸಮಸ್ಯೆ ಜಿಲ್ಲಾಡಳಿತಕ್ಕೆ ತಲೆ ನೋವಾದರೆ, ಮಂಗಳೂರು ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಮಂಗಳೂರು ಮಹಾನಗರ ಪಾಲಿಕೆಗೆ ಆತಂಕವನ್ನು ಸೃಷ್ಟಿಸುತ್ತದೆ. ಆದರೆ ಈ ಬಾರಿ ಮಂಗಳೂರು ನಗರಕ್ಕಾಗಲಿ, ಜಿಲ್ಲೆಯ ಇತರೆಡೆಗಾಗಲಿ ಕುಡಿಯುವ ನೀರಿಗೆ ಬರವಿಲ್ಲ ಎಂಬುದು ನೆಮ್ಮದಿ ತಂದಿದೆ.