
ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ‘ಭೂತದ ಬಾಯಲ್ಲಿ ಭಗವದ್ಗೀತೆ’
ಮಂಗಳೂರು: ಬೆಲೆ ಏರಿಕೆಯ ಪಿತಾಮಹ ಆಗಿರುವ ಕಾಂಗ್ರೆಸ್ ನೇತೃತ್ವದ ಕರ್ನಾಟಕ ರಾಜ್ಯ ಸರಕಾರವು ಇವತ್ತು ಬೆಲೆ ಏರಿಕೆಯ ವಿರುದ್ಧ ಪ್ರತಿಭಟನೆ ಮಾಡಲು ಹೊರಟಿದೆ ಎಂದರೆ, ಭೂತದ ಬಾಯಲ್ಲಿ ಭಗವದ್ಗೀತೆ ಎಂಬ ಗಾದೆಮಾತು ಈ ಭ್ರಷ್ಟ ಕಾಂಗ್ರೆಸ್ ಸರಕಾರಕ್ಕೇನೆ ಹೇಳಿ ಮಾಡಿಸಿದಂತಿದೆ.
ರಾಜ್ಯದಲ್ಲಿ ಈ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದಾಗಿನಿಂದ ಜನಸಾಮಾನ್ಯರ ದಿನ ಬಳಕೆ ವಸ್ತುಗಳು, ಸೇವೆಗಳು, ಸರಕಾರಿ ಕೆಲಸಗಳ ಶುಲ್ಕಗಳು, ಹೀಗೆ ಅನೇಕ ರೀತಿಯಲ್ಲಿ ಬೆಲೆ ಏರಿಕೆಯನ್ನು ಖುದ್ದು ಸಿದ್ದರಾಮಯ್ಯರವರ ಸರಕಾರವು ತನ್ನ ಕೈಯಾರೆ ಬೆಲೆಯನ್ನು ಏರಿಸುವ ಆದೇಶವನ್ನು ಮಾಡಿದ ಪರಿಣಾಮ ಇವತ್ತು ಜನಸಾಮಾನ್ಯರು ಹೈರಾಣ ಆಗಿದ್ದಾರೆ. ಇತ್ತೀಚೆಗಷ್ಟೇ ಹಾಲಿನ ದರವನ್ನು ಏರಿಸಿದ್ದು, ಪೆಟ್ರೋಲಿಯಂ ಮೇಲೆ ರಾಜ್ಯ ಸರಕಾವು ಹೆಚ್ಚುವರೀ ತೆರಿಗೆ ಹಾಕೊ ಮೂಲಕ ಬೆಲೆಗಳನ್ನು ಏರಿಸಿದ್ದ ಪರಿಣಾಮ ಆಹಾರ ಪದಾರ್ಥಗಳ ಬೆಲೆಗಳೂ ಏರಿದವು, ಹೊಟೇಲ್ ಉದ್ಯಮವು ಅನಿವಾರ್ಯವಾಗಿ ತಮ್ಮ ದರಗಳನ್ನು ಏರಿಸಿದ್ದು ಜನ ಸಾಮಾನ್ಯರಿಗೆ ನೇರವಾಗಿ ಪರಿಣಾಮವನ್ನು ಬೀರಿದೆ.
ಬೆಲೆ ಏರಿಕೆಗೆ ಕೇಂದ್ರದ ವಿರುದ್ಧ ಪ್ರತಿಭಟನೆಗೆ ಸಿದ್ದರಾಗಿರುವ ರಾಜ್ಯ ಕಾಂಗ್ರೆಸ್ ದೇಶದ ಒಟ್ಟೂ ಹಣದುಬ್ಬರಕ್ಕಿಂತ ಕರ್ನಾಟಕದ ಹಣದುಬ್ಬರ ಜಾಸ್ತಿ ಏಕಿದೆ ಅನ್ನುವುದನ್ನು ಉತ್ತರಿಸಲಿ. ರಾಜ್ಯದ ಕಾಂಗ್ರೆಸ್ ಸರಕಾರವು ಪೆಟ್ರೊಲ್ ದರವನ್ನು ಪ್ರತೀ ಲೀಟರಿಗೆ 3 ರೂ. ಹೆಚ್ಚಿಸಿದ್ದರ ವಿರುದ್ಧ ಯಾಕೆ ನಿಮ್ಮ ಪ್ರತಿಭಟನೆ ಕಾಣಲೇ ಇಲ್ಲವಲ್ಲಾ. ಹಾಂಗತ ಬೆಲೆಗಳನ್ನು ಏರಿಸೋದಕ್ಕೆ ಯಾವ ವಸ್ತುವನ್ನು ಬಿಟ್ಟಿದ್ದೀರಾ ಅನ್ನುವುದನ್ನು ಹುಡುಕಬೇಕಿದೆ.
ಸ್ಟಾಂಪ್ ಪೇಪರ್ ಏರಿಕೆ, ಸರಕಾರಿ ಸೇವೆಗಳ, ಜನನ ಮರಣ ಪ್ರಮಾಣಪತ್ರಗಳು, ನೊಂದಣಿ ಮುದ್ರಾಂಕ ಶುಲ್ಕಗಳ ದರ ಏರಿಕೆ, ಮೆಟ್ರೋ ಪ್ರಯಾಣದರ ಏರಿಕೆ, ಹಾಗೂ ಲಿಕ್ಕರ್ ದರ ಏರಿಸಿದ್ದರ ಪರಿಣಾಮ ಇದರ ಲಾಭ ಮಾತ್ರ ಪಕ್ಕದ ರಾಜ್ಯಕ್ಕೆ ಹೋದದ್ದು ತನ್ನನ್ನು ತಾನು ಆರ್ಥಿಕ ತಜ್ಞ ಎಂದುಕೊಳ್ಳುವ ಮುಖ್ಯಮಂತ್ರಿ ಅವರಿಗೇ ತಿಳಿಯದೇ ಹೋಯಿತು. ಇನ್ನು ಸರಕಾರಿ ನಿಗಮ ಆಗಿರುವ ಕೆ.ಎಸ್.ಆರ್.ಟಿ.ಸಿಯ ಉದ್ಯೋಗಿಗಳಿಗೆ ಸಂಬಳವನ್ನು ಕೊಟ್ಟು ನಿಗಮವನ್ನು ನಡೆಸಲು 2 ಸಾವಿರ ಕೋಟಿ ರೂಪಾಯಿ ಸಾಲವನ್ನು ತಗೋತೀವಿ ಅಂತ ಸಚಿವರಾದ ರಾಮಲಿಂಗಾ ರೆಡ್ಡಿಯವರು ಅಲವತ್ತುಕೊಂಡಿದ್ದಾರೆ ಅಂದರೆ ಸರಕಾರಿ ಖಜಾನೆಯನ್ನು ಬರಿದು ಮಾಡಿ ಬಿಟ್ಟಿದ್ದು ಎದ್ದು ಕಾಣುತ್ತಿದೆ. ಅದರ ಮೇಲೆ ಸಾವಿರಾರು ಕೋಟಿಗಳ ಹಗರಣಗಳ ಸರಮಾಲೆ, ಸರಕಾರೀ ಅಧಿಕಾರಿಗಳು ನಿಮ್ಮ ಸರಕಾರದ ಭೃಷ್ಟಾಚಾರಕ್ಕೆ ಹೆದರಿ ಖಿನ್ನರಾಗಿ ಆತ್ಮಹತ್ಯೆಯನ್ನು ಮಾಡಿಕೊಳ್ಳುವ ಪರಿಸ್ಥಿತಿ.
ಗುತ್ತಿಗೆದಾರರಿಗೆ ಪಾವತಿ ಮಾಡದೆ ಸತಾಯಿಸಿ ಮತ್ತೊಂದು ಭೃಷ್ಟಾಚಾರಕ್ಕೆ ಅನುವು ಆಗುವಂತೆ ನೋಡಿಕೊಂಡಿದ್ದು. ಇನ್ನು ಪ್ರಗತಿ ಮೂಲೆಗುಂಪಾಗಿ ಶಾಸಕರ ಅನುದಾನಕ್ಕೂ ಕತ್ತರಿ ಹಾಕಿದ್ದು. ಶಿಕ್ಷಣ ಹಾಗೂ ಪೋಲೀಸ್ ಇಲಾಖೆಯಲ್ಲಿ ಖಾಲಿ ಇರುವ ಸಾವಿರಾರು ಹುದ್ದೆಗಳನ್ನು ಭರ್ತಿ ಮಾಡದೇ ಬಾಕಿ ಉಳಿಸಿದ್ಧು ಯಾಕೆಂದು ತಿಳಿಸಲು ಸಾಧ್ಯವೇ...? ಭರ್ತಿ ಮಾಡಿದರೆ ತಿಂಗಳಿಗೆ ಕೊಡಬೇಕಾದ ಹಣವನ್ನು ಎಲ್ಲಿಂದ ತರೋದು ಅನ್ನು ದೂರಾಲೋಚನೆ ಇರಬಹುದು. ಇಷ್ಟೆಲ್ಲಾ ಹಗರಣಗಳು, ರಾಜ್ಯದ ಬೊಕ್ಕಸವನ್ನು ಅಸಮರ್ಪಕವಾಗಿ ನಿರ್ವಹಣೆ ಮಾಡಿದ್ದಂತಹ ಎಲ್ಲಾ ಕೊರತೆಗಳನ್ನು ನೀವೇ ನಿಮ್ಮಲ್ಲಿ ಹೊತ್ತುಕೊಂಡಿರುವಿರಿ.
ಆದರೂ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿರುವ ಕೇಂದ್ರ ಸರಕಾರದ ವಿರುದ್ದ ಯಾವ ಮುಖ ಹೊತ್ತುಕೊಂಡು ಪ್ರತಿಭಟನೆ ಮಾಡುತ್ತೀರೋ ಆ ದೇವರೇ ಬಲ್ಲ...?
ಇನ್ನು ಕೇಂದ್ರ ಸರ್ಕಾರವು ಹಿರಿಯ ನಾಗರೀಕರಿಗಾಗಿ ಜಾರಿ ಮಾಡಿರುವ ಉಚಿತ ಆರೋಗ್ಯ ವಿಮೆಯನ್ನು ನಮ್ಮ ಕರ್ನಾಟಕ ರಾಜ್ಯದಲ್ಲಿ ಅನುಷ್ಠಾನಕ್ಕೆ ತರಲು ಸಾಧ್ಯವಾಗದೇ ಇರುವ ನಿಮ್ಮ ಕಾಂಗ್ರೇಸ್ ಸರಕಾರ ಹಿರಿಯ ಜೀವದೊಟ್ಟಿಗೆ ಚೆಲ್ಲಾಟವಾಡುತ್ತಿರುವುದು ನಿಮ್ಮ ಸರಕಾರದ ಕಾರ್ಯವನ್ನು ಮುಂದಿನ ದಿನ ಜನತೆಯೇ ಶಿಕ್ಷಿಸಲಿದೆ, ಇನ್ನಾದರೂ ಮುಂದೆ ನಿಮ್ಮ ಪಕ್ಷದೊಳಗಿನ ಕಾಲೆಳತ ಅಧಿಕಾರ ದಾಹಗಳನ್ನು ನಿರ್ಗಹಿಸಿ ಪ್ರಗತಿಯತ್ತ ಕರುನಾಡನ್ನು ಮುನ್ನಡೆಸುವಂತೆ ಕೆಲಸಮಾಡಿ ಎಂದು ದಕ್ಷಿಣ ಕನ್ನಡ ಬಿಜೆಪಿ ಪ್ರಕಟಣೆಯಲ್ಲಿ ಆಗ್ರಹಿಸಿದೆ.