
ರಥಬೀದಿ ಸರ್ಕಾರಿ ಕಾಲೇಜಿನ ಸಮಾಜ ಕಾರ್ಯ ವಿಭಾಗದ ಗ್ರಾಮೀಣ ಶಿಬಿರ
Sunday, April 27, 2025
ಮಂಗಳೂರು: ಕೊಕ್ರಾಡಿಯ ಸರಕಾರ ಸಂಯುಕ್ತ ಪದವಿಪೂರ್ವ ಕಾಲೇಜು ಪ್ರೌಢಶಾಲೆ ವಿಭಾಗದ ಶಾಲೆಯ ಸಭಾಂಗಣದಲ್ಲಿ ಮಂಗಳೂರಿನ ರಥಬೀದಿಯ ಡಾ. ಪಿ. ದಯಾನಂದ ಪೈ-ಪಿ. ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜ ಕಾರ್ಯ ವಿಭಾಗದ ಗ್ರಾಮೀಣ ಶಿಬಿರವಕ್ಕೆ ಏ.21 ರಂದು ಶಾಲೆಯ ಮುಖ್ಯೋಪಾಧ್ಯಾಯ ಮೊಹಮ್ಮದ್ ರಿಯಾಜ್ ಅವರು ಚಾಲನೆ ನೀಡಿದರು.
ಅಂಡಿಂಜೆ ಗ್ರಾಮ ಪಂಚಾಯತ್ ಅಧ್ಯಕ್ಷ ನಿತಿನ್ ಅವರು ಶಿಬಿರವನ್ನು ಜನರ ಸಹಭಾಗಿತ್ವದಲ್ಲಿ ಅತ್ಯಂತ ವಿಶಿಷ್ಟವಾಗಿ ಹಮ್ಮಿಕೊಂಡಿದ್ದು ಇದು ಗ್ರಾಮದ ಸಮಸ್ಯೆಗಳ ಕುರಿತು ತಿಳಿದುಕೊಳ್ಳಲು ಪರಿಣಾಮಕಾರಿ ವಿಧಾನವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಧರಣೇಂದ್ರ ಕುಮಾರ್, ಅಂಡಿಂಜೆಯ ಗ್ರಾಮ ಪಂಚಾಯತ್ ಕಾರ್ಯದರ್ಶಿ ಚಂಪಾ, ಉಪಾಧ್ಯಕ್ಷೆ ಶ್ವೇತ, ಗ್ರಾಮ ಪಂಚಾಯತ್ ಸದಸ್ಯ ಜಗದೀಶ ಹೆಗ್ಡೆ, ಕಾಲೇಜಿನ ಎಂಎಸ್ಡಬ್ಲ್ಯೂ ವಿಭಾಗದ ಸಂಯೋಜಕಿ ಅರುಣ ಕುಮಾರಿ, ಉಪನ್ಯಾಸಕಿ ಶ್ರೀಕಲ ಕುಮಾರಿ ಉಪಸ್ಥಿತರಿದ್ದರು.
ಕಾವ್ಯ ಸ್ವಾಗತಿಸಿ, ಪುನೀತ್ ಕಾರ್ಯಕ್ರಮ ನಿರ್ವಹಿಸಿದರು. ಸ್ವಸ್ತಿಕ್ ವಂದಿಸಿದರು.