ಆರೋಗ್ಯ ಇಲಾಖೆ ವಿಫಲ: ಸಿ.ಎಂ. ಜಕ್ಕಾಳಿ ಆರೋಪ

ಆರೋಗ್ಯ ಇಲಾಖೆ ವಿಫಲ: ಸಿ.ಎಂ. ಜಕ್ಕಾಳಿ ಆರೋಪ

ಮಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಯೋಜನೆಗೆ ಸಂಬಂಧಿಸಿದಂತೆ 26 ಪ್ರಶ್ನೆಗಳನ್ನು ಜಿಲ್ಲಾ ಅರೋಗ್ಯಾಧಿಕಾರಿಯವರಿಗೆ ಕೇಳಲಾಗಿದ್ದು, ಸೂಕ್ತ ಉತ್ತರ ನೀಡಲು ವಿಫಲರಾಗಿದ್ದಾರೆ. ಇದು ಇಲಾಖೆಯ ವೈಫಲ್ಯಕ್ಕೆ ಹಿಡಿದಿರುವ ಕೈಗನ್ನಡಿಯಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಸಿ.ಎಂ. ಜಕ್ಕಾಳಿ ಆರೋಪಿಸಿದರು.

ಹೆಣ್ಣು ಭ್ರೂಣ ಹತ್ಯೆ ನಿಯಂತ್ರಣ ಮತ್ತು ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಸಂವಿಧಾನದಲ್ಲಿ ಗರ್ಭಿಣಿ ನೋಂದಣಿಯನ್ನು ಕಡ್ಡಾಯಗೊಳಿಸುವ ಕಾಯ್ದೆಯನ್ನು ತಿದ್ದುಪಡಿಮಾಡಿ ಭ್ರೂಣಕ್ಕೆ ಡಿಜಿಟಲ್ ಕೋಡ್ 

ನೀಡುವ ಆರುಷಿ ಮೈ ಡಾಟರ್ ಯೋಜನೆಯನ್ನು ಕಾಯ್ದೆಯನ್ನಾಗಿ ರೂಪಿಸುವಂತೆ ಕೇಂದ್ರ ಸರಕಾರಕ್ಕೆ ವರದಿಯನ್ನು ನೀಡುವಂತೆ ರಾಜ್ಯ ಸರಕಾರಕ್ಕೆ 2014ರಲ್ಲಿ ಮನವಿ ಸಲ್ಲಿಸಲಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.

ಇಲಾಖೆಯಲ್ಲಿ ಇರುವ ಎಂ.ಸಿ.ಟಿ.ಎಸ್. ಯೋಜನೆಯನ್ನು ಅಪ್ಗ್ರೇಡ್ ಮಾಡಿ ಆರ್.ಸಿ.ಎಚ್. ಯೋಜನೆಯನ್ನು 2019ರಲ್ಲಿ ಜಾರಿಗೆ ತರಲಾಗಿದೆ. ಈ ಆರ್.ಸಿ.ಎಚ್. ಯೋಜನೆಯ ಕುರಿತು 26 ಪ್ರಶ್ನೆಗಳನ್ನು ಇಲಾಖೆಗೆ ಕೇಳಾಗಿದ್ದು, ಒಂದು ತಿಂಗಳ ಅವದಿ ಪೂರ್ಣಗೊಂಡಿದ್ದು ಯಾವುದೇ ಮಾಹಿತಿ ನೀಡಿಲ್ಲ.ನವಜಾತ ಹೆಣ್ಣು ಶಿಶು ನಿರ್ಲಕ್ಷತೆಗೆ ಒಳಗಾದಲ್ಲಿ ಶಿಶುವಿಗೆ ಮಾತ್ರ ಅನ್ಯಯವಾಗಿರುವುದಿಲ್ಲ, ಜನ್ಮ ನೀಡಿದ ತಾಯಿಗೂ ಕೂಡ ಅನ್ಯಯವಾಗುತ್ತದೆ ಎಂದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article