
ಕರಿಂಜೆಯಲ್ಲಿ ನೀರಿನ ಟ್ಯಾಂಕ್ ಉದ್ಘಾಟನೆ
Friday, April 11, 2025
ಮೂಡುಬಿದಿರೆ: ಕರಿಂಜೆ 21ನೇ ವಾರ್ಡಿನಲ್ಲಿ ಎಂ.ಆರ್.ಪಿ.ಎಲ್ ಮತ್ತು ಪುರಸಭೆ ವತಿಯಿಂದ ಒಟ್ಟು 65.70ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ 1.5ಲಕ್ಷ ಸಾಮರ್ಥ್ಯದ ನೀರಿನ ಟ್ಯಾಂಕ್ ಅನ್ನು ಶಾಸಕ ಉಮಾನಾಥ ಎ.ಕೋಟ್ಯಾನ್ ಶುಕ್ರವಾರ ಉದ್ಘಾಟಿಸಿದರು.
ನಂತರ ಮಾತನಾಡಿದ ಕೋಟ್ಯಾನ್ ಅವರು ಈ ವಾರ್ಡಿನಲ್ಲಿ ನೀರಿನ ಸಮಸ್ಯೆ ಇದ್ದು, ಜನರು ಮತ್ತು ಈ ವಾರ್ಡಿನ ಸದಸ್ಯೆ ಜಯಶ್ರೀ ಕೇಶವ್ ಅವರ ಬೇಡಿಕೆಯಂತೆ ಈ ಟ್ಯಾಂಕನ್ನು ನಿರ್ಮಿಸಲು ಅನುದಾನ ಒದಗಿಸಲಾಗಿದೆ. ಇಲ್ಲಿನ ಜನರ ಬೇಡಿಕೆಯನ್ನು ಈಡೇರಿಸಿದ ತೃಪ್ತಿ ನನಗಾಗಿದ್ದು ಶುದ್ಧ ಕುಡಿಯುವ ನೀರು ಪ್ರತಿ ಮನೆಗೆ ಮುಟ್ಟುವಂತಾಗಬೇಕೆಂದ ಅವರು ಇನ್ನು ಹಲವಾರು ಯೋಜನೆಗಳನ್ನು, ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದು ಭರವಸೆ ನೀಡಿದರು.
ಅಧ್ಯಕ್ಷೆ ಜಯಶ್ರೀ ಕೇಶವ್ ಮಾತಾಡಿ, ಈ ವಾರ್ಡಿನ ಅಭಿವೃದ್ಧಿಗೆ ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿ, ಇನ್ನು ಈ ವಾರ್ಡಿನಲ್ಲಿ ಅಗಲಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಮಾಹಿತಿ ನೀಡಿದರು.
ಉಪಾಧ್ಯಕ್ಷ ನಾಗರಾಜ್ ಪೂಜಾರಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಸ್ವಾತಿ ಪ್ರಭು,, ಕೆ ಆರ್ ಪಂಡಿತ್, ಬಾಹುಬಲಿ ಪ್ರಸಾದ್, ಕೃಷ್ಣರಾಜ ಹೆಗ್ಡೆ, ಲಕ್ಷ್ಮಣ್ ಪೂಜಾರಿ, ದಿನೇಶ್ ಪೂಜಾರಿ, ಸತೀಶ್ ಭಂಡಾರಿ, ಮಜಾಲೋಡಿ ಹರೀಶ್ ಶೆಟ್ಟಿ, ಹರಿಪ್ರಸಾದ್, ಚಾರ್ಲಿ ಪೇರೆರಾ, ಸೋಮಶೇಖರ್, ಬಾಲಕೃಷ್ಣ,ಪುರಸಭಾ ಸದಸ್ಯರಾದ ರಾಜೇಶ್ ನಾಯ್ಕ್, ದಿವ್ಯ ಜಗದೀಶ್, ಧನಲಕ್ಷ್ಮೀ ಮುಖ್ಯಧಿಕಾರಿ ಇಂದು ಎಂ., ಇಂಜಿನಿಯರ್ ನಳಿನಾ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.