
ತೋಡಾರು ಉರೂಸ್: ಎ.26ರಂದು ಸೌಹಾರ್ದ ಸಮಾರಂಭ
Thursday, April 24, 2025
ಮೂಡುಬಿದಿರೆ: ತೋಡಾರು ಬದ್ರಿಯಾ ಸುನ್ನಿ ಜುಮಾ ಮಸೀದಿಯಲ್ಲಿ ಸಯ್ಯಿದ್ ವಲಿಯುಲ್ಲಾಹಿ ದರ್ಗಾ ಶರೀಫ್ ಹೆಸರಲ್ಲಿ ನಡೆಸಿಕೊಂಡು ಬರುವ ತೋಡಾರು ಮಖಾಂ ಉರೂಸ್ ಎ.18 ರಂದು ಪ್ರಾರಂಭಗೊಂಡಿದ್ದು 26ರವರೆಗೆ ನಡೆಯಲಿದೆ. ಎ.26ರಂದು ಸಂಜೆ 7ರಿಂದ ಸೌಹಾರ್ದ ಸಮಾರಂಭ ನಡೆಯಲಿದೆ ಎಂದು ಮಸೀದಿಯ ಅಧ್ಯಕ್ಷ ಎಂಎಎಸ್ ಆಸೀಫ್ ಇಕ್ಬಾಲ್ ತಿಳಿಸಿದರು.
ಪ್ರೆಸ್ಕ್ಲಬ್ನಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು. ಎ.25ರಂದು ಸಂದಲ್ ಮೆರವಣಿಗೆ ಹಿದಾಯತ್ ನಗರದಿಂದ ಮಸೀದಿಯವರೆಗೆ ನಡೆಯಲಿದೆ. 26ರಂದು ನಡೆಯುವ ಸೌಹಾರ್ದ ಸಮಾರಂಭದಲ್ಲಿ ಉಲಾಮ, ಉಮಾರಗಳು, ರಾಜಕೀಯ ಹಾಗೂ ಊರ ಗಣ್ಯರು ಆಗಮಿಸಲಿದ್ದಾರೆ.
ಸಭಾಧ್ಯಕ್ಷತೆಯನ್ನು ವಿಧಾನಸಭೆಯ ಸಭಾಪತಿ ಯು.ಟಿ. ಖಾದರ್ ವಹಿಸಲಿದ್ದು, ಶಾಸಕ ಉಮಾನಾಥ ಕೋಟ್ಯಾನ್ ಉದ್ಘಾಟಿಸಲಿದ್ದಾರೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ ಆಳ್ವ, ಸಂಸದ ಬೃಜೇಶ್ ಚೌಟ, ಮಾಜಿ ಸಚಿವ ಅಭಯಚಂದ್ರ ಜೈನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ಅಬ್ದುಲ್ ರಜಾಕ್, ಉರೂಸ್ ಸಮಿತಿಯ ಅಧ್ಯಕ್ಷ ಪಿ.ಎಚ್ ಇಸ್ಮಾಯಿಲ್, ಉಪಾಧ್ಯಕ್ಷ ಎಂ. ಎ. ರಜಾಕ್, ಎಂ. ಬದ್ರುದ್ದಿನ್, ಕೋಶಾಧಿಕಾರಿ ಇಬ್ರಾಹಿಂ, ಪ್ರಧಾನ ಕಾರ್ಯದರ್ಶಿ ಹಿದಾಯತ್, ಜೊತೆ ಕಾರ್ಯದರ್ಶಿಗಳಾದ ಆಶೀರ್, ಅಬ್ದುಲ್ ರಹಿಮಾನ್ ಉಪಸ್ಥಿತರಿದ್ದರು.