
ರಾಮಕೃಷ್ಣ ಪೈ ನಿಧನ
Tuesday, April 1, 2025
ಮೂಡುಬಿದಿರೆ: ಹಿರಿಯ ಬಾಣಸಿಗ ಕಲ್ಲಬೆಟ್ಟು ಗೊಲ್ಲ ನಿವಾಸಿ ಕರಿಂಜೆ ರಾಮಕೃಷ್ಣ ಪೈ ಅವರು ಅಲ್ಪಕಾಲದ ಅಸೌಖ್ಯದಿಂದ ಮಂಗಳವಾರ ನಿಧನ ಹೊಂದಿದರು.
ಮೃತರು ಪತ್ನಿ, ಪುತ್ರ ಪಾಕತಜ್ಞ, ರಂಗ ನಟ ಕರಿಂಜೆ ಗಣೇಶ್ ಪೈ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಮೂಡುಬಿದಿರೆ ಶ್ರೀ ವೆಂಕಟರಮಣ ಮತ್ತು ಶ್ರೀ ಹನುಮಂತ ದೇವಸ್ಥಾನದಲ್ಲಿ ಸಹಾಯಕರಾಗಿ, ನೈವೇದ್ಯ ತಯಾರಿ ಸಹಿತ ವಿವಿಧ ಕಾರ್ಯ ನಿರ್ವಹಿಸಿದ್ದ ಅವರು ಸುಮಾರು ಮೂರುವರೆ ದಶಕಗಳಿಂದ ಸೇವೆ ಸಲ್ಲಿಸಿದ್ದರು. ಕಾಪು ಶ್ರೀ ವೆಂಕಟರಮಣ ದೇವಸ್ಥಾನದಲ್ಲೂ ಕೆಲವು ವರ್ಷ ನೈವೇದ್ಯ ತಯಾರಿ ಕಾರ್ಯ ನಿರ್ವಹಿಸಿದ್ದರು. ಅಡುಗೆ ಸಹಾಯಕರಾಗಿಯೂ ಅವರು ಗುರುತಿಸಿಕೊಂಡಿದ್ದರು.