ರಾಷ್ಟ್ರಮಟ್ಟದ ಪ್ರಬಂಧ ಸ್ಪಧೆ೯: ಅಳಿಯೂರು ಸ.ಪ್ರೌ. ಶಾಲೆಯ ತನ್ವಿ ತೃತೀಯ

ರಾಷ್ಟ್ರಮಟ್ಟದ ಪ್ರಬಂಧ ಸ್ಪಧೆ೯: ಅಳಿಯೂರು ಸ.ಪ್ರೌ. ಶಾಲೆಯ ತನ್ವಿ ತೃತೀಯ


ಮೂಡುಬಿದಿರೆ: 'ಆಧುನಿಕ ಕಾಲದಲ್ಲಿ ಅಂಚೆ ಪತ್ರಗಳ ಪಾತ್ರ’ ಎಂಬ ವಿಷಯದಲ್ಲಿ ನಡೆದ ರಾಜ್ಯ, ರಾಷ್ಟ್ರಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ರಾಜ್ಯದ ಪುತ್ತೂರು ಅಂಚೆ ವಿಭಾಗದಿಂದ ಅಳಿಯೂರು ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿನಿ ಕು.ತನ್ವಿ ತೃತೀಯ ಬಹುಮಾನ ಪಡೆದಿದ್ದಾರೆ.

ಈ ಸ್ಪರ್ಧೆಯಲ್ಲಿ ರಾಜ್ಯದ ಬೇರೆ ಬೇರೆ ಕಡೆಯ ಖಾಸಗಿ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.ತನ್ವಿ ತೃತೀಯ ಬಹುಮಾನ ಪಡೆಯುವುದರೊಂದಿಗೆ 5 ಸಾವಿರ ನಗದು ಪಡೆದಿದ್ದಾರೆ.

ಬಹುಮಾನ ವಿಜೇತೆಗೆ ಅಳಿಯೂರು ಶಾಖೆಯ ಅಂಚೆಪಾಲಕ ವೇದಪ್ರಕಾಶ್, ಸಹಾಯಕ ಅಂಚೆಪಾಲಕ ದಾನೇಶ್ ಬಹುಮಾನ ವಿತರಿಸಿದರು.ಅಳಿಯೂರು ಪ್ರೌಢಶಾಲಾ ಶಿಕ್ಷಕ ಸುಬ್ರಹ್ಮಣ್ಯ ಅವರು ಉಪಸ್ಥಿತರಿದ್ದರು.

ಬಹುಮಾನ ವಿಜೇತೆ ತನ್ವಿ ವಾಲ್ಪಾಡಿ ಗ್ರಾಮ ಪಂಚಾಯತ್ ಸದಸ್ಯೆ ಯಶೋಧ ನಾಯ್ಕ್ ಅವರ ಪುತ್ರಿ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article