ಆಕ್ಟೀವಾಕ್ಕೆ ಲಾರಿ ಢಿಕ್ಕಿ: ಸವಾರನ ಮೃತ್ಯು

ಆಕ್ಟೀವಾಕ್ಕೆ ಲಾರಿ ಢಿಕ್ಕಿ: ಸವಾರನ ಮೃತ್ಯು

ಪುತ್ತೂರು: ಆಕ್ಟೀವಾ ಸ್ಕೂಟಿಗೆ ಲಾರಿಯೊಂದು ಹಿಂದಿನಿಂದ ಢಿಕ್ಕಿಹೊಡೆದು ಆಕ್ಟೀವಾ ಸವಾರ ಮೃತಪಟ್ಟ ಘಟನೆ ಪುತ್ತೂರು ನಗರ ಮುಖ್ಯ ರಸ್ತೆಯಲ್ಲಿ ಮಾಯ್‌ದೆ ದೇವುಸ್ ಚರ್ಚ್ ಎದುರು ಶನಿವಾರ ಸಂಭವಿಸಿದೆ. 

ಪುತ್ತೂರು ನಗರದ ಹೊರವಲಯದ ಕೆಮ್ಮಿಂಜೆ ಪ್ರಾನ್ಸಿಸ್ ಲೂವಿಸ್ (74) ಮೃತಪಟ್ಟವರು.

ಪ್ರಾನ್ಸಿಸ್ ಲೂವಿಸ್ ಅವರು ಕೆಮ್ಮಿಂಜೆಯಿಂದ ಪುತ್ತೂರಿನ ಮಾಯ್‌ದೆ ದೇವುಸ್ ಚರ್ಚ್ ಕಡೆಗೆ ಚಲಾಯಿಸಿಕೊಂಡು ಬರುತ್ತಿದ್ದ ಆಕ್ಟೀವಾ ಸ್ಕೂಟಿಗೆ ದರ್ಬೆಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಲಾರಿ ಚರ್ಚ್ ಬಳಿ ಹಿಂದಿನಿಂದ ಬಂದು ಢಿಕ್ಕಿ ಹೊಡೆದಿರುವುದಾಗಿ ತಿಳಿದು ಬಂದಿದೆ. 

ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಪ್ರಾನ್ಸಿಸ್ ಲೂವಿಸ್ ಅವರನ್ನು ಪುತ್ತೂರು ನಗರಸಭೆಯ ಉಪಾಧ್ಯಕ್ಷ ಬಾಲಚಂದ್ರ ಕೆಮ್ಮಿಂಜೆ ಮತ್ತಿತರರು ಸೇರಿಕೊಂಡು ಪುತ್ತೂರಿನ ಆಸ್ಪತ್ರೆಯೊಂದಕ್ಕೆ ಕರೆದೊಯ್ದು ದಾಖಲಿಸಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮಂಗಳೂರಿನ ಫಾದರ್ ಮುಲ್ಲರ‍್ಸ್ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿತ್ತು. ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. 

ಘಟನೆಗೆ ಸಂಬಂಧಿಸಿ ಜೋಸೆಫ್ ಡಿ.ಸೋಜಾ ಎಂಬವರು ನೀಡಿರುವ ದೂರಿನಂತೆ ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article