ಗಾಳಿಗೆ ವ್ಯಾಪಕ ಕೃಷಿ ಹಾನಿ: ಅಡಿಕೆ ಮರಗಳು ಧರಾಶಾಯಿ

ಗಾಳಿಗೆ ವ್ಯಾಪಕ ಕೃಷಿ ಹಾನಿ: ಅಡಿಕೆ ಮರಗಳು ಧರಾಶಾಯಿ


ಸುಳ್ಯ: ಸೋಮವಾರ ಸಂಜೆ ಸುರಿದ ಮಳೆಗೆ ಮತ್ತು ಬೀಸಿದ ಗಾಳಿಗೆ ಸುಳ್ಯ ತಾಲೂಕಿನ ವಿವಿಧ ಭಾಗಗಳಲ್ಲಿ ವ್ಯಾಪಕ ಕೃಷಿ ಹಾನಿ ಸಂಭವಿಸಿದೆ.

ಬೀಸಿದ ಗಾಳಿಗೆ ವಿವಿಧ ಕಡೆಗಳಲ್ಲಿ ಅಡಿಕೆ, ತೆಂಗು, ರಬ್ಬರ್, ಬಾಳೆ, ಕೊಕ್ಕೊ ಸೇರಿದಂತೆ ಕೃಷಿ ನಾಶ ಸಂಭವಿಸಿದೆ. ಸುಳ್ಯ ಆರಂಬೂರಿನ ಮಧುವನ ಭಾಗಗದಲ್ಲಿ  ತೋಟದಲ್ಲಿ ಕೃಷಿ ಹಾನಿ ಉಂಟಾಗಿದೆ. ಆಡಿಕೆ ಮರಗಳು ಮುರಿದು ಬಿದ್ದು ಅಪಾರ ನಷ್ಟ ಸಂಭವಿಸಿದೆ ಎಂದು ಕೃಷಿಕರು ತಿಳಿಸಿದ್ದಾರೆ. 

ಮರಗಳು ಮುರಿದು ರಸ್ತೆ ತಡೆ ಉಂಟಾಗಿದೆ. ಕೆಲವೆಡೆ ಮನೆ ಛಾವಣಿಯ ಶೀಟ್‌ಗಳು ಹಾರಿ ಹೋಗಿದೆ. ಗಾಳಿಗೆ ಬಿದ್ದು ವಿದ್ಯುತ್ ಕಂಬಗಳು ತುಂಡಾಗಿದೆ, ಮನೆಗಳಿಗೆ ಹಾನಿ ಉಂಟಾಗಿದೆ. ಗಾಳಿಗೆ ವಿದ್ಯುತ್ ಕಂಬಗಳು ಧರಾಶಾಯಿಯಾಗಿದೆ.

ಗಾಳಿಗೆ 60ಕ್ಕೂ ಹೆಚ್ಚು ವಿದ್ಯುತ್ ಕಂಬಗಳಿಗೆ ಹಾನಿಯಾಗಿದ್ದು, ವಿದ್ಯುತ್ ಸರಬರಾಜು ಜಾಲ ಅಸ್ತವ್ಯಸ್ತಗೊಂಡಿದೆ. 40 ಎಲ್‌ಟಿ ಹಾಗೂ 20 ಹೆಚ್‌ಟಿ ಕಂಬಗಳು ಮುರಿದಿದೆ. ಇದರಿಂದ ಗ್ರಾಮೀಣ ಹಾಗೂ ನಗರ ಸೇರಿ ವಿದ್ಯುತ್ ಕಡಿತ ಉಂಟಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article