ಭರತ್ ಕುಮ್ಡೇಲುಗೆ ಬೆದರಿಕೆ: ಸೋಮೊಟೊ ಕೇಸ್ ದಾಖಲು

ಭರತ್ ಕುಮ್ಡೇಲುಗೆ ಬೆದರಿಕೆ: ಸೋಮೊಟೊ ಕೇಸ್ ದಾಖಲು

ಬಂಟ್ವಾಳ: ಸಂಘಪರಿವಾರ ಸಂಘಟನೆಯ ಪ್ರಮುಖ ಭರತ್ ಕುಮ್ಡೇಲು ಅವರಿಗೆ ಸಾಮಾಜಿಕ ಜಾಲತಾಣದ ಮೂಲಕ ಬಂದಿರುವ ಬೆದರಿಕೆಯ ಹಿನ್ನಲೆಯಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸರು ಸ್ವಯಂಪ್ರೆರೀತ ಪ್ರಕರಣ ದಾಖಲಿಸಿದರಾದರೂ ಈ ವಿಚಾರದಲ್ಲಿ ಪೊಲೀಸರ ತನಿಖೆಯ ಬಗ್ಗೆ ಸಂಘಪರಿವಾರ ಸಂಘಟನೆಯ ಪ್ರಮುಖರಲ್ಲಿ ಅಸಮಾಧಾನ ವ್ಯಕ್ತವಾಗಿದೆ.

ಬಂಟ್ವಾಳ ತಾ.ನ ಪುಳಿಮಜಲು ನಿವಾಸಿ ಸುಹಾಸ್ ಶೆಟ್ಟಿ ಯವರನ್ನು ಬಜ್ಪೆಯಲ್ಲಿ ಬರ್ಬರವಾಗಿ ಕೊಚ್ಚಿ ಕೊಲೆಗೈದ ಬೆನ್ನಲ್ಲೇ ಜಿಲ್ಲೆಯ ಮತ್ತಿಬ್ಬರು ಹಿಂದೂಸಂಘಟನೆಯ ನಾಯಕರುಗಳಾದ ಶರಣ್ ಪಂಪ್‌ವೆಲ್ ಮತ್ತು ಭರತ್ ಕುಮ್ಡೆಲು ಅವರ ಹೆಸರು ಉಲ್ಲೇಖಿಸಿ ಬೆದರಿಕೆಯ ಪೋಸ್ಟರ್ ಹಾಕಿ ವಿಕೃತಿ ಮೆರದಿದ್ದರೂ, ಈ ಪೋಸ್ಟ್ ಹಾಕಿದವರ ವಿರುದ್ಧ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿಲ್ಲ, ಕ್ರಮವನ್ನು ಕೈಗೊಂಡಿಲ್ಲ ಎಂಬ ಗಂಭೀರ ಆರೋಪ ಸಂಘಪರಿವಾರ ಸಂಘಟನೆಯ ಪ್ರಮುಖರಿಂದ ಕೇಳಿಬಂದಿದೆ.

ಸುಹಾಸ್ ಹತ್ಯೆಗೂ ಮುನ್ನ ಇದೇ ರೀತಿಯಾಗಿ ಪೇಸ್‌ಬುಕ್ ಪೇಜ್ ಒಂದರಲ್ಲಿ ಬೆದರಿಕೆಯ ಪೋಸ್ಟ್ ಹಾಕಲಾಗಿತ್ತು.ಅವಾಗಲೂ ಪೊಲೀಸ್ ಇಲಾಖೆ ಯಾವುದೇ ಕ್ರಮ ಕೈಗೊಳ್ಳದೆ ಸುಹಾಸ್ ತನ್ನ ಆತ್ಮರಕ್ಷಣೆಗಾಗಿ ತನ್ನ ವಾಹನದಲ್ಲಿರಿಸುತ್ತಿದ್ದನೆನ್ನಲಾದ ವೆಪನನ್ನೇ ಬಜಪೆ ಪೊಲೀಸರು ದರೋಡೆ ಪ್ರಕರಣ ದಾಖಲಿಸುವ ಬೆದರಿಕೆ ಒಡ್ಡಿ ಸಹಾಸ್ ನಿರಾಯುಧವಾಗಿ ಸಂಚರಿಸುವಾಗಲೇ ಹತ್ಯೆ ಮಾಡಲಾಗಿದೆಯೆಂಬ ಗಂಭೀರ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದ್ದಲ್ಲದೆ ಖುದ್ದು ಸಹಾಸ್ ಹೆತ್ತವರು,ಸಂಘ ಪರಿವಾರ ಸಂಘಟನೆಯ ಮುಖಂಡರು ಆರೋಪಿಸುತ್ತಲೇ ಬಂದಿದ್ದಾರೆ.

ಈ ವಿಚಾರದಲ್ಲು ಪೊಲೀಸ್ ತನಿಖಾ ತಂಡ ವಿಚಾರಣೆ ನಡೆಸಿದ ಬಗ್ಗೆ ಇನ್ನು ಸ್ಪಷ್ಟತೆ ನೀಡಿಲ್ಲ ಎಂದು ಹಿಂದೂಸಂಘಟನೆಯ ಪ್ರಮುಖರೋರ್ವರು ತಿಳಿಸಿದ್ದಾರೆ.

ಇದೀಗ ಸಂಘ ಪರಿವಾರ ಸಂಘಟನೆಯಲ್ಲಿ ಗುರುತಿಸಿಕೊಂಡಿರುವ ಭರತ್ ಕುಮ್ಡೆಲು ಅವರಿಗೆ ಬೆದರಿಕೆಯ ಸಂದೇಶವನ್ನು ಸಾಮಾಜಿಕ ಜಾಲತಾಣದ ಮೂಲಕ ಹರಿಯಬಿಡಲಾಗಿದ್ದು,ಬಂಟ್ವಾಳ ಗ್ರಾಮಾಂತರ ಪೊಲೀಸರು ತಮ್ಮ ಮೇಲಿನ ಹೊಣೆಯನ್ನು ಜಾರಿಸಿಕೊಳ್ಳಲು ಸ್ವಯಂಪ್ರೆರೀತ ಕೇಸು ದಾಖಲಿಸಿದ್ದಾರಾದರೂ ಬೆದರಿಕೆಯನ್ನು ಎದುರಿಸುತ್ತಿರುವ ಭರತ್ ಕುಮ್ಡೆಲು ಅವರನ್ನು ಪೊಲೀಸ್ ಅಧಿಕಾರಿಗಳು  ಸಂಪರ್ಕಿಸುವುದಾಗಲೀ ಅಥವಾ ಯಾವುದೇ ಭದ್ರತೆಯನ್ನು ಒದಗಿಸುವ ಕಾರ್ಯವನ್ನು ಮಾಡಿಲ್ಲ ಎಂದು ಆರೋಪಿಸಲಾಗಿದೆ.

ಯಾರು ಸಂಪರ್ಕಿಸಿಲ್ಲ: ಭರತ್ ಕುಮ್ಡೆಲು

ಸಾಮಾಜಿಕ ಜಾಲತಾಣದ ಮೂಲಕ ಬೆದರಿಕೆ ಬಂದಿರುವುದು ನಿಜ, ಬೆದರಿಕೆಗೆ ಸಂಬಂಧಿಸಿದಂತೆ ಈವರೆಗೆ ಪೊಲೀಸ್ ಅಧಿಕಾರಿಗಳು ಸೌಜನ್ಯಕ್ಕಾದರೂ ಸಂಪರ್ಕ ಮಾಡಿಲ್ಲ. ಪೊಲೀಸರ ಭದ್ರತೆಯನ್ನು ನಾನು ನಿರೀಕ್ಷಿಸುವುದು ಇಲ್ಲ ಎಂದು ಭರತ್ ಕುಮ್ಡೆಲು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಭರತ್ ಕುಮ್ಡೆಲು ಅವರಿಗೆ ಬೆದರಿಕೆ ಪೋಸ್ಟ್ ಬಗ್ಗೆ ಸುಮೋಟೊ ಕೇಸ್ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ತಿಂಗಳ ಹಿಂದೆ ಫರಂಗಿಪೇಟೆ ನಿವಾಸಿ ಬಾಲಕ ದಿಗಂತ್ ನಾಪತ್ತೆ ಸಂದರ್ಭ ನಡೆದ ಪ್ರತಿಭಟನಾ ಸಭೆಯ ಬಳಿಕವು ಭರತ್ ಕುಮ್ಡೇಲುವಿಗೆ ಬೆದರಿಕೆ ಕರೆ ಬಂದಿತ್ತು. ಆಗಲು ಪೊಲೀಸರಿಗೆ ದೂರು ನೀಡಲಾಗಿತ್ತಾದರೂ ಈ ಪ್ರಕರಣದಲ್ಲಿ ಪೊಲೀಸರ ತನಿಖೆಯ ಪ್ರಗತಿ ಇನ್ನ ದಡ ತಲುಪಿಲ್ಲ ಎಂದು ಆರೋಪಿಸಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article