ಆಕ್ರೋಶಿತರಿಂದ ರಿಕ್ಷಾಕ್ಕೆ ಮುತ್ತಿಗೆ

ಆಕ್ರೋಶಿತರಿಂದ ರಿಕ್ಷಾಕ್ಕೆ ಮುತ್ತಿಗೆ


ಬಂಟ್ವಾಳ: ಹಿಂದೂ ಸಂಘಟನೆಯ ಕಾರ್ಯಕರ್ತ ಸುಹಾಸ್ ಶೆಟ್ಟಿಯ ಮೃತದೇಹ ಬಂಟ್ವಾಳಕ್ಕೆ ಆಗಮಿಸುವ ವೇಳೆ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಯಿತು. ಆದಾಗಿಯೂ ಆಟೊ ರಿಕ್ಷಾವೊಂದು ಪ್ರಯಾಣಿಕರನ್ನು ಕೂರಿಸಿ ಜನರ ಗುಂಪಿನ ನಡುವೆ ಸಂಚರಿಸಿದ ವೇಳೆ ಸೇರಿದ್ದವರು ಆಕ್ರೋಶಿತರಾಗಿ ಆಟೋರಿಕ್ಷಾಕ್ಕೆ ಮುತ್ತಿಗೆ ಹಾಕಿ ಚಾಲಕನನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು. 

ಕೂಡಲೇ ಸಂಘಟನೆಯ ಹಿರಿಯರು ಹಾಗೂ ಪೊಲೀಸರು ಮಧ್ಯಪ್ರವೇಶಿಸಿ ಆಟೊವನ್ನು ಹೋಗಲು ಬಿಟ್ಟರು. ಬಳಿಕ ಬಿ.ಸಿ.ರೋಡ್ ಬಸ್ ನಿಲ್ದಾಣದ ಮುಂಭಾಗ ಕಾರ್ಯಕರ್ತರು ಮೃತದೇಹದ ಅಂತಿಮ ದರ್ಶನ ಪಡೆದರು.

ಬಿ.ಸಿ.ರೋಡಿನಿಂದ ಪುಳಿಮಜಲು ಸುಹಾಸ್ ಮನೆಯವರೆಗೂ ದಾರಿ ಮಧ್ಯೆ ಬಂಟ್ವಾಳ ಬೈಪಾಸ್, ವಗ್ಗ ಜಂಕ್ಷನ್ ಮೊದಲಾದೆಡೆ ಸಾರ್ವಜನಿಕರಿಗೆ ಪಾರ್ಥಿವ ಶರೀರದ  ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು.

ಐಜಿ ಅಮಿತ್ ಸಿಂಗ್, ಎಸ್.ಪಿ. ಯತೀಶ್ ಎನ್., ನಗರ ಠಾಣಾ ಪೊಲೀಸ್ ಇನ್ಸ್‌ಪೆಕ್ಟರ್ ಆನಂತಪದ್ಮನಾಭ, ಎಸ್.ಐ. ರಾಮಕೃಷ್ಣ ಅವರು ಪರಿಸ್ಥಿತಿಯನ್ನು ನಿಭಾಯಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article