ಸ್ಕೋಟರ್‌ನ ಬ್ಯಾಟರಿಕಳವಿಗೆ ವಿಫಲ ಯತ್ನ

ಸ್ಕೋಟರ್‌ನ ಬ್ಯಾಟರಿಕಳವಿಗೆ ವಿಫಲ ಯತ್ನ

ಬಂಟ್ವಾಳ: ದೇವಸ್ಥಾನವೊಂದರ ಮುಂಭಾಗದಲ್ಲಿ ನಿಲ್ಲಿಸಲಾಗಿದ್ದ ದ್ವಿಚಕ್ರ ವಾಹನಗಳ ಬ್ಯಾಟರಿ ಕಳವು ಮಾಡಲು ವಿಫಲ ಯತ್ನದ ಘಟನೆ ಫರಂಗಿಪೇಟೆಯಲ್ಲಿ ನಡೆದಿದೆ.

ಫರಂಗಿಪೇಟೆ ಸಮೀಪದ ಶ್ರೀ ವರದೇಶ್ವರ ದೇವಸ್ಥಾನದ ಮುಂಭಾಗದಲ್ಲಿ ನಿಲ್ಲಿಸಿದ್ದ ಸುಮಾರು ನಾಲ್ಕು ದ್ವಿಚಕ್ರ ವಾಹನಗಳ ಮುಂಭಾಗದ ಬಿಡಿಭಾಗಗಳನ್ನು ತೆರದಿಡಲಾಗಿದೆ.

ರಾತ್ರಿ ಪಾಳಿಯ ಕೆಲಸಕ್ಕೆಂದು ಹೋಗುವವರು ತಮ್ಮ ಸ್ಕೂಟರ್‌ಗಳನ್ನು ಇಲ್ಲಿ ನಿಲುಗಡೆಗೊಳಿಸುತ್ತಿದ್ದು, ಬೆಳಿಗ್ಗೆ ಬಂದು ನೋಡಿದಾಗ ವಾಹನಗಳ ಬಿಡಿಭಾಗಗಳು ಪುಡಿಯಾದ ಸ್ಥಿತಿಯಲ್ಲಿ ಕಂಡುಬಂದಿತ್ತು.

ಆರಂಭದಲ್ಲಿ ವಾಹನಗಳನ್ನು ದುಷ್ಕರ್ಮಿಗಳು ಪುಡಿಗೈದಿರುವ ಶಂಕೆ ವ್ಯಕ್ತವಾಗಿತ್ತಾದರೂ ಪೊಲೀಸ್ ತನಿಖೆಯ ಬಳಿಕ ಇದೊಂದು ಕಳವಿಗೆ ಯತ್ನ ಪ್ರಕರಣ ಎಂದು ಹೇಳಲಾಗಿದೆ.

ಸ್ಕೂಟರ್‌ಗಳ ಬ್ಯಾಟರಿ ಕಳವು ಮಾಡಲು ಪ್ರಯತ್ನಿಸಿ ವಿಫಲರಾಗಿರುವ ಶಂಕೆಯನ್ನು ಗ್ರಾಮಾಂತರ ಪೊಲೀಸರು ವ್ಯಕ್ತಪಡಿಸಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article