
‘ಸನಾತನ ರಾಷ್ಟ್ರ’ಕ್ಕಾಗಿ ‘ರಾಮರಾಜ್ಯ ಸಂಕಲ್ಪ ಜಪಯಜ್ಞ’ದ ಮೂಲಕ ಒಂದು ಕೋಟಿ ರಾಮ ನಾಮ ಜಪ
ಗೋವಾ: ಭಾರತದಲ್ಲಿ ‘ರಾಮರಾಜ್ಯ’ ಕೇವಲ ಒಂದು ಧಾರ್ಮಿಕ ಆದರ್ಶವಲ್ಲ, ಬದಲಾಗಿ ಇದನ್ನು ಸಂಸ್ಕೃತಿ, ನೀತಿ ಮತ್ತು ನ್ಯಾಯ ಆಧಾರಿತ ಆಡಳಿತ ವ್ಯವಸ್ಥೆಯ ಸಂಕೇತವೆಂದು ಪರಿಗಣಿಸಲಾಗಿದೆ. ಈ ಮಹಾನ್ ಉದ್ದೇಶದ ಕಡೆಗೆ ಒಂದು ಮಹತ್ವದ ಹೆಜ್ಜೆಯಿಡುತ್ತಾ ಫರ್ಮಾಗುಡಿ-ಫೊಂಡಾದಲ್ಲಿ ಸನಾತನ ಸಂಸ್ಥೆಯು ಆಯೋಜಿಸಿದ್ದ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದಲ್ಲಿ ‘ಸನಾತನ ರಾಷ್ಟ್ರ’ದ ಸ್ಥಾಪನೆಗಾಗಿ ‘ರಾಮರಾಜ್ಯ ಸಂಕಲ್ಪ ಜಪಯಜ್ಞ’ದ ಮೂಲಕ ಒಂದು ಕೋಟಿ ಬಾರಿ ‘ಶ್ರೀರಾಮ ನಾಮ’ದ ಜಪವನ್ನು ಮಾಡಲಾಯಿತು. ಈ ಜಪಯಜ್ಞದಿಂದ ಸಂಪೂರ್ಣ ವಾತಾವರಣವು ರಾಮಮಯವಾಗಿತ್ತು.
ಸನಾತನ ಧರ್ಮದ ಪ್ರಚಾರದ ಕಾರ್ಯವು ಸಾಧನೆ, ದೇವರ ಆರಾಧನೆಯಾಗಿದೆ. ನಾವು ನಮ್ಮ ವ್ಯಕ್ತಿತ್ವವನ್ನು ಪಣಕ್ಕಿಟ್ಟು ಮತ್ತು ಸಂಘಟಿತರಾಗಿ ಪರಮಾತ್ಮನ ಸೇವೆಯಲ್ಲಿ ನಮ್ಮನ್ನು ಅರ್ಪಿಸಿಕೊಳ್ಳಬೇಕು. ಹಾಗಾದಾಗ ಸುವರ್ಣ ಕಾಲ ದೂರವಿಲ್ಲ. ಸನಾತನ ಸಂಸ್ಥೆಯ ಸಂಪೂರ್ಣ ಕಾರ್ಯ ಆಧ್ಯಾತ್ಮಿಕತೆಯ ತಳಹದಿಯ ಮೇಲೆ ನಿಂತಿದೆ. ಭಾರತ ರಾಷ್ಟ್ರವನ್ನು ಒಂದೆಂದು ತಿಳಿದು ಕೆಲಸ ಮಾಡುತ್ತಿದ್ದಾರೆ. ಭಗವದ್ಗೀತೆಯು ಯುದ್ಧಭೂಮಿಯಲ್ಲಿ ಹೇಳಲ್ಪಟ್ಟ ಗ್ರಂಥ. ಸನಾತನ ಸಂಸ್ಥೆಯು ಈ ಗ್ರಂಥದಂತೆಯೇ ಆಧ್ಯಾತ್ಮದಿಂದ ಯುದ್ಧದವರೆಗೆ ಜಾಗೃತಿ ಮೂಡಿಸಿದೆ. ನಾನು ಈ ಮಹೋತ್ಸವದಲ್ಲಿ ಯುದ್ಧಕಲೆಗಳ ಪ್ರದರ್ಶನವನ್ನು ನೋಡಿದೆ. ದೇಶದ ಎಲ್ಲಾ ಸಂತರು ತಮ್ಮ ಶಿಷ್ಯರಿಗೆ ಇದನ್ನು ಕಲಿಸಬೇಕು ಎಂದು ನಾನು ಭಾವಿಸುತ್ತೇನೆ ಎಂದು ಪ.ಪೂ. ಸ್ವಾಮಿ ಗೋವಿಂದ ದೇವಗಿರಿಜಿ ಮಹಾರಾಜ ಹೇಳಿದರು.
ದೇಶದಲ್ಲಿ ಅಲ್ಪಸಂಖ್ಯಾತರ ಸಂಖ್ಯೆ ವಿಪರೀತವಾಗಿ ಹೆಚ್ಚಾಗುತ್ತಿದ್ದು, ಹಿಂದೂಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಅಲ್ಪಸಂಖ್ಯಾತರ ಸಂಖ್ಯೆ ಕೋಟಿಗಟ್ಟಲೆ ಹೆಚ್ಚುತ್ತಿರುವಾಗ ಅವರನ್ನು ಅಲ್ಪಸಂಖ್ಯಾತರು ಎಂದು ಹೇಗೆ ಕರೆಯುವುದು? ಅಲ್ಪಸಂಖ್ಯಾತರಿಂದಲೇ ಲವ್ ಜಿಹಾದ್, ಲ್ಯಾಂಡ್ ಜಿಹಾದ್, ಮತಾಂತರ ಸೇರಿದಂತೆ ಅನೇಕ ಸಮಸ್ಯೆಗಳಿಗೆ ಹಿಂದೂಗಳು ಬಲಿಯಾಗುತ್ತಿದ್ದಾರೆ. ಅಕ್ರಮ ನುಸುಳುಕೋರರು ಸಿಂಗಾಪುರ, ಚೀನಾ, ಅರಬ್ ರಾಷ್ಟ್ರಗಳಿಗೆ ನುಸುಳದೆ ಭಾರತಕ್ಕೆ ಏಕೆ ಬರುತ್ತಾರೆ? ಏಕೆಂದರೆ ಕಾಂಗ್ರೆಸ್ ಮಾಡಿದ ಅನೇಕ ಕಾನೂನುಗಳಿಂದ ಅವರಿಗೆ ಕೇವಲ ಸೌಲಭ್ಯಗಳು ಮಾತ್ರವಲ್ಲ, ಕಾನೂನು ರಕ್ಷಣೆಯೂ ಸಿಗುತ್ತದೆ. ಆದ್ದರಿಂದ ಜನಸಂಖ್ಯಾ ನಿಯಂತ್ರಣ ಕಾಯ್ದೆಯೇ ಅನೇಕ ಸಮಸ್ಯೆಗಳಿಗೆ ಉತ್ತರ ಎಂದು ನ್ಯಾಯವಾದಿ ಅಶ್ವಿನಿ ಉಪಾಧ್ಯಾಯ ಹೇಳಿದರು.
ವರ್ಷ 2008ರಲ್ಲಿ ಭಗವಾ ಭಯೋತ್ಪಾದನೆ, ಸಾಧ್ವಿ ಪ್ರಜ್ಞಾಸಿಂಗ್ ಅವರನ್ನು ಬಂಧಿಸಿ ಅವರ ಮೇಲೆ ನಡೆಸಿದ ಅತ್ಯಾಚಾರ ಈ ರೀತಿಯಾಗಿ ಹಿಂದೂ ಧರ್ಮದ ಅಪಕೀರ್ತಿ ನಡೆಯುತ್ತಿರುವಾಗ ನಾನು ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರನ್ನು ಭೇಟಿ ಮಾಡಿ ಈ ಕುರಿತು ಚರ್ಚಿಸಿದ್ದೆ. ಆ ಸಮಯದಲ್ಲಿ ಅವರು ತಮ್ಮ ದಿವ್ಯದೃಷ್ಟಿಯಿಂದ ನೀಡಿದ ಮಾಹಿತಿಯ ಅನುಭವ ನನಗೆ ಇಂದಿಗೂ ಆಗುತ್ತಿದೆ. ಸನಾತನ ಸಂಸ್ಥೆಯು ನಿಜವಾದ ಅರ್ಥದಲ್ಲಿ ಧರ್ಮ ಮತ್ತು ಆಧ್ಯಾತ್ಮವನ್ನು ಪ್ರಚಾರ ಮಾಡುತ್ತಿದೆ. ಇದಕ್ಕಾಗಿಯೇ ಶಂಖನಾದ ಮಹೋತ್ಸವವನ್ನು ಆಯೋಜಿಸಲಾಗಿದೆ. ಈ ಮಹೋತ್ಸವದಿಂದ ನನಗೆ ವಿಶ್ವರೂಪದ ದರ್ಶನವಾಗುತ್ತಿದೆ ಎಂದು ಸುರೇಶ್ ಚವ್ಹಾಣಕೆ ಹೇಳಿದರು.
ಆರ್ಟ್ ಆಫ್ ಲಿವಿಂಗ್ನ ದರ್ಶಕ ಹತ್ತಿ ಮಾತನಾಡಿ, ಕುಂಭಮೇಳಕ್ಕೆ 66 ಕೋಟಿ ಜನರು ಬಂದಿದ್ದರು. ಅವರು ಕೇವಲ ಸ್ನಾನಕ್ಕಾಗಿ ಬಂದಿರಲಿಲ್ಲ, ಬದಲಿಗೆ ಒಂದು ಸಿದ್ಧಾಂತದ ಮೇಲಿನ ಶ್ರದ್ಧೆಯಿಂದ ಬಂದಿದ್ದರು. ದೃಷ್ಟಿಯಿಟ್ಟು ಕೆಲಸ ಮಾಡಬೇಕು. ಸದ್ಯ ದೇಶ ಮತ್ತು ವಿದೇಶಗಳ ಹಿಂದೂಗಳನ್ನು ಗೊಂದಲಕ್ಕೀಡು ಮಾಡಲಾಗುತ್ತಿದೆ. ಆದ್ದರಿಂದ, ಅವರಿಗೆ ವೈಜ್ಞಾನಿಕ ಪರಿಭಾಷೆಯಲ್ಲಿ ಆಧ್ಯಾತ್ಮವನ್ನು ವಿವರಿಸುವ ಅವಶ್ಯಕತೆಯಿದೆ, ಈ ಕಾರ್ಯವನ್ನು ಸನಾತನ ಸಂಸ್ಥೆಯು ಮಾಡುತ್ತಿದೆ. ನಾವು ಸಂಪೂರ್ಣ ಜಗತ್ತನ್ನು ಸನಾತನವನ್ನಾಗಿಸೋಣ ಎಂದರು.
ಈ ಸಂದರ್ಭದಲ್ಲಿ ಧಾರ್ಮಿಕ ದತ್ತಿ ಇಲಾಖೆಯ ಮಾಜಿ ಆಯುಕ್ತ ನಂದಕುಮಾರ, ನ್ಯಾಯವಾದಿ ಪ್ರಮಿಳಾ ನೇಸರ್ಗಿ, ಯುವಾ ಬ್ರಿಗೇಡ್ನ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ, ರಾಷ್ಟ್ರ ರಕ್ಷಣಾ ಪಡೆಯ ಪುನೀತ್ ಕೆರೆಹಳ್ಳಿ, ರಾಷ್ಟ್ರ ಧರ್ಮ ಸಂಘಟನೆಯ ಸಂಸ್ಥಾಪಕ ಸಂತೋಷ್ ಕೆಂಚಾಂಬ, ಅರುಣ್ ಶ್ಯಾಮ್, ಹಿರಿಯ ವಕೀಲರು, ಅಯ್ಯಪ್ಪ ಸೇವಾ ಸಮಾಜಮ್ನ ಅಧ್ಯಕ್ಷ ಎನ್. ಜಯರಾಮ ಅಡ್ಡಂಡ ಕಾರ್ಯಪ್ಪ ಮತ್ತಿತರರು ಉಪಸ್ಥಿತರಿದ್ದರು.