
ನೂತನವಾಗಿ ಶಿಕ್ಷಕರ ರಸ್ತೆಯೆಂದು ನಾಮಕರಣ
Wednesday, May 28, 2025
ಕಾಸರಗೋಡು: ಕುಬಣೂರು ವಿದ್ಯಾನಗರದಿಂದ ಕಾಡಮೂಲೆ (ಶಾಂತಿಮೂಲೆ)ಗೆ ಹೋಗುವ ರಸ್ತೆಗೆ ಶಿಕ್ಷಕ ರಸ್ತೆ ಎಂದು ನಾಮಕರಣ ಮಾಡಲಾಯಿತು.
ಕೇವಲ ಒಂದು ಕಿಲೋಮೀಟರ್ ದೂರವಿರುವ ಈ ರಸ್ತೆಯ ಇಕ್ಕೆಲಗಳ ಮನೆಗಳಲ್ಲಿ ಜನಿಸಿದ, ಮದುವೆಯಾಗಿ ಬಂದ ಹಾಗೂ ಹೋದ ಶಿಕ್ಷಕರುಗಳು 23 ಮಂದಿ ಇದ್ದ ಕಾರಣ ಶಿಕ್ಷಕರ ರಸ್ತೆ ಎಂದು ನಾಮಕರಣ ಮಾಡಲಾಗಿದೆ.
ಇಲ್ಲಿ, ಸತೀಶ್ ಮಾಸ್ತರ್, ಹರೀಶ್ ಮಾಸ್ತರ್, ಶ್ವೇತಾಕುಮಾರಿ ಟೀಚರ್, ಅಪರ್ಣಾ ಟೀಚರ್, ರಾಜೀವಿ ಟೀಚರ್, ಪೂರ್ಣಿಮಾ ಟೀಚರ್, ತ್ರಿವೇಣಿ ಟೀಚರ್, ಚಂಚಲ ಟೀಚರ್, ಆಶಾ ಟೀಚರ್, ಶ್ರೀವಿದ್ಯಾ ಟೀಚರ್, ಸುಹಾಸಿನಿ ಟೀಚರ್, ಪುಷ್ಪ ಟೀಚರ್, ಗೀತಾಂಜಲಿ ಟೀಚರ್, ರೂಪಶ್ರೀ ಟೀಚರ್, ಶ್ವೇತಾ ಟೀಚರ್, ಸಂಧ್ಯಾ ಕುಮಾರಿ ಟೀಚರ್, ಸಂಧ್ಯಾ ಟೀಚರ್, ರೇಣುಕಾ ಟೀಚರ್, ದೀಕ್ಷಾ ಟೀಚರ್, ಪ್ರಕೃತಿ ಟೀಚರ್, ಶರ್ಮಿಳಾ ಟೀಚರ್, ವಿಶಾಲಾಕ್ಷಿ ಟೀಚರ್, ರಕ್ಷಿತ ಟೀಚರ್ ಎಂಬುಬಬರು ಇದ್ದ ಕಾರಣ ಶಿಕ್ಷಕರ ರಸ್ತೆ ಎಂದು ನಾಮಕರಣ ಮಾಡಲಾಗಿದೆ.
ಶಿಕ್ಷಕರು ಭಾಷಾಭಿಮಾನ ತೋರಿಸುವ ನಿಟ್ಟಿನಲ್ಲಿ ಕನ್ನಡ ಹಾಗೂ ರಾಷ್ಟ್ರಭಾಷೆ ಹಿಂದಿಯಲ್ಲಿ ಬರೆಯಲಾಗಿದೆ.