ಸುಹಾಸ್ ಶೆಟ್ಟಿ ಹತ್ಯೆ: ಮೀನು ವ್ಯಾಪಾರಿಯ ಕೊಲೆ ಯತ್ನ

ಸುಹಾಸ್ ಶೆಟ್ಟಿ ಹತ್ಯೆ: ಮೀನು ವ್ಯಾಪಾರಿಯ ಕೊಲೆ ಯತ್ನ

ಮಂಗಳೂರು: ಮೀನು ವ್ಯಾಪಾರಿಯೋರ್ವರು ನಗರದ ಕುಂಟಿಕಾನದಲ್ಲಿ ಗ್ರಾಹಕರೊಬ್ಬರನ್ನು ಕಾಯುತ್ತಿದ್ದಾಗ, ಅವರ ಮೇಲೆ ಕಲ್ಲು ಹೊತ್ತು ಹಾಕಿ ಕೊಲೆಗೆ ಯತ್ನಿಸಿರುವ ಘಟನೆ ಶುಕ್ರವಾರ ಬೆಳಗ್ಗೆ ವರದಿಯಾಗಿದೆ.

ಹಲ್ಲೆಗೊಳಗಾದ ಮೀನು ವ್ಯಾಪಾರಿಯನ್ನು ಉಳ್ಳಾಲದ ಲುಕ್ಮಾನ್ ಎಂದು ಗುರುತಿಸಲಾಗಿದೆ.

ಶುಕ್ರವಾರ ಬೆಳಗ್ಗೆ 6.30ರ ಸುಮಾರಿಗೆ ಮೀನು ವ್ಯಾಪಾರಿಯಾಗಿರುವ ಲುಕ್ಮಾನ್, ಕುಂಟಿಕಾನದಲ್ಲಿ ಮೀನು ಕೊಡಲು ಗ್ರಾಹಕರೋರ್ವರನ್ನು ಕಾಯುತ್ತಿದ್ದರು. ಆ ವೇಳೆ ಕಪ್ಪು ಬಣ್ಣದ ಇನ್ನೋವಾ ಕಾರಿನಲ್ಲಿ ಬಂದ ತಂಡವು, ಲುಕ್ಮಾನ್ ಅವರ ಮೇಲೆ ಹಲ್ಲೆ ಮಾಡಿದೆ ಎಂದು ತಿಳಿದು ಬಂದಿದೆ.

ಬಳಿಕ ಲುಕ್ಮಾನ್ ಅವರನ್ನು ಕೆಳಗೆ ಬೀಳಿಸಿದ ತಂಡವು ಅವರ ಮೇಲೆ ಕಲ್ಲು ಹೊತ್ತು ಹಾಕಿ ಕೊಲೆಗೆ ಪ್ರಯತ್ನಿಸಿದೆ. ಅದನ್ನು ನೋಡಿದ ಹಿಂದೂ ಮಹಿಳೆಯೊಬ್ಬರು ಬೊಬ್ಬೆ ಹೊಡೆದು ರಕ್ಷಣೆಗೆ ಮುಂದಾಗಿದ್ದರಿಂದ ಲುಕ್ಮಾನ್ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article