ನವಚೇತನ ಸೇವಾಬಳಗದ 'ಪಂಚಮಿಲನೋತ್ಸವ' ಕಾರ್ಯಕ್ರಮ

ನವಚೇತನ ಸೇವಾಬಳಗದ 'ಪಂಚಮಿಲನೋತ್ಸವ' ಕಾರ್ಯಕ್ರಮ


ಮೂಡುಬಿದಿರೆ: ನವಚೇತನ ಸೇವಾಬಳಗ(ರಿ) ತೋಡಾರು ಇದರ ಐದನೇ ವರ್ಷದ ನವಚೇತನ 'ಪಂಚಮಿಲನೋತ್ಸವ' ಕಾರ್ಯಕ್ರಮವವನ್ನು ಗುರುಪುರ ವಜ್ರದೇಹಿ ಮಠದ   ರಾಜಶೇಖರಾನಂದ ಸ್ವಾಮೀಜಿ ಉದ್ಘಾಟಿಸಿದರು.

ತುಳುವ ಬೊಳ್ಳಿ ದಯಾನಂದ ಕತ್ತಲ್ ಅವರು ತಂಡವನ್ನು ಉದ್ದೇಶಿಸಿ ಮಾತನಾಡಿದರು.

ನವಚೇತನ ಪಂಚಮಿಲನೋತ್ಸವದ ಅಂಗವಾಗಿ ಒಟ್ಟು 180 ಮಕ್ಕಳಿಗೆ ಪುಸ್ತಕ, ಕೊಡೆ, ಕಂಪಸ್ ಬಾಕ್ಸ್ ಸ್ಕೂಲ್ ಬ್ಯಾಗ್ ಪೆನ್ಸಿಲ್ ರಬ್ಬರ್ ಪೆನ್ ವಿತರಿಸಲಾಯಿತು. ಮತ್ತು  ಬಡ ಕುಟುಂಬಕ್ಕೆ ಮನೆ ನಿರ್ಮಿಸಿ ಅದರ ಕೀಲಿ ಕೈ ಹಸ್ತಾಂತರ ಮಾಡಲಾಯಿತು. 17 ಅನಾರೋಗ್ಯ ಪೀಡಿತ ಕುಟುಂಬಕ್ಕೆ ತಲಾ 10,000 ದಂತೆ ಧನ ಸಹಾಯ ನೀಡಲಾಯಿತು. ಸಾಧಕರಿಗೆ ಸನ್ಮಾನ, ವಿದ್ಯಾರ್ಥಿ ವೇತನ ನೀಡಲಾಯಿತು.

ಸ್ಥಾಪಕ ಅಧ್ಯಕ್ಷ ಸುಕೇಶ್ ಜಿ ಅಂಚನ್, ಹಾಗೂ ಜಯಂತ್ ಕುಕ್ಕೇಡಿ, ಅಧ್ಯಕ್ಷ ಕೀರ್ತನ್ ಪೂಜಾರಿ ಬೋಳ,ಕಾರ್ಯದರ್ಶಿ ವಿಜೇತ್ ವಿ ಪೂಜಾರಿ, ಕೋಶಾಧಿಕಾರಿ ದಿನಕರ್ ಮರ್ನಾಡ್ ಉಪಸ್ಥಿತಿ ಇದ್ದರು.ನಂತರ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶನದ ಶಿವಧೂತ ಗುಳಿಗೆ ನಾಟಕ ನಡೆಯಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article